ದಾದರ್ ನಾ ಚೈತನ್ಯ ಭೂಮಿಯಲ್ಲಿ ಡಾ, ಬಿ.ಆರ್ ಅಂಬೇಡ್ಕರ್ ಅವರ – ಮಹಾ ಪರಿನಿರ್ವಾಣ ದಿನಾಚರಣೆ.

ರೋಣ ಡಿ.08

ಮುಂಬೈನ ದಾದರ್ ನಲ್ಲಿ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಮಹಾನ್ ಮಾನವತವಾದಿ ಡಾ, ಬಿ.ಆರ್ ಅಂಬೇಡ್ಕರ್ ಅನುಯಾಹಿಗಳು ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಚೈತನ್ಯ ಭೂಮಿಯ ದರ್ಶನ ಪಡೆಯುವುದರ ಮೂಲಕ 68 ನೇ. ಮಹಾ ಪರಿನಿರ್ವಾಣ ದಿನಾಚರಣೆ ನಡೆಸಲಾಯಿತು.ಮಹಾ ಪರಿನಿರ್ವಾಣ ದಿನಾಚರಣೆ ಹಿನ್ನೆಲೆ ಡಾ, ಬಿ.ಆ‌ರ್. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೆಣದಬತ್ತಿ ಹಚ್ಚುವ ಮೂಲಕ ಗೌರವ ಸಮರ್ಪಿಸಲಾಯಿತು.ತದನಂತರ ಡಿ 7 ರಂದು ಅಂಬೇಡ್ಕರವರ ಮನೆಯನ್ನು ವೀಕ್ಷಣೆ ಮಾಡುವುದರ ಮೂಲಕ ದಾದರ್ ನಾ ಚೈತನ್ಯ ಭೂಮಿಯಿಂದ ನಿರ್ಗಮಿಸಿದರು. ನಂತರ ಯುವ ಮುಖಂಡ ಅಂದಪ್ಪ ಮಾದರ ಮಾತನಾಡಿ ಡಾ, ಬಿ.ಆರ್ ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ ವಿದ್ಯಾರ್ಥಿಗಳು ಹಾಗೂ ಯುವಕರು ಡಾ, ಬಿ.ಆರ್ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕು. ಬಾಬಾ ಸಾಹೇಬರ ಆಶಯದಂತೆ ಎಲ್ಲರೂ ಶಿಕ್ಷಣವಂತರಾಗಿ ಎನಾದರು ಸಾಧನೆ ಮಾಡಬೇಕು. ಸಂವಿಧಾನದಿಂದ ಎಲ್ಲಾ ವರ್ಗದ ಜನರಿಗೆ ಸಮಾನತೆಯನ್ನು ನೀಡಿದ್ದಾರೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ರೇವಪ್ಪ ಮಾದರ, ಹಣಮಂತ ಮಾದರ. ನಿಂಗಮ್ಮ ಮಾದರ ಭೀಮಪ್ಪ ತಿಲಗರ್. ಶಿವಗಂಗಮ್ಮ ಮಾದರ. ಶಿವವ್ವ ಮಾದರ ಮಲ್ಲೇಶ್. ಮಾದರ ಕುಮಾರ ತಿಲಗರ, ನಾಗಮ್ಮ ಮಾದರ. ಸುಜಾತಾ. ದೊಡ್ಡಮನಿ, ಪ್ರಶಾಂತ ಮಾದರ. ಪ್ರಕಾಶ ಮಾದರ. ಜಗದೀಶ್ ಮಾದರ. ಆನಂದ್ ಮಾದರ. ಕಿರಣ ಮಾದರ. ಗೋಪಾಲ ಮಾದರ. ದೇವರಾಜ್. ಮಾದರ. ರಮೇಶ ಮಾದರ. ಇನ್ನೂ ಅನೇಕರು ಮತ್ತು ಮುದ್ದು ಮಕ್ಕಳು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button