“ವಿಜಯ”ಪುರಕ್ಕೆ ವಿಜಯವಾಗಲಿ.

ವಿಜಯಪುರ ಇದರ ಪೂರ್ವ ನಾಮಗಳು ಬಿಜ್ಜನಹಳ್ಳಿ, ವಿಜಾಪುರ, ಬಿಜಾಪುರ. ಹೆಸರಲ್ಲೇ ವಿಜಯ ಹೊಂದಿದ ನಾಡು ನಮ್ಮ ಹೆಮ್ಮೆಯ ವಿಜಯಪುರ. 2014 ನವೆಂಬರ್ 1, ಕಾಂಗ್ರೆಸ್ ಆಳುತ್ತಿದ್ದ ಕಾಲದಂದು ಬಿಜಾಪುರದಿಂದ ವಿಜಯಪುರ ಎಂದು ಮರು ನಾಮಕರಣವಾಯಿತು. ಈ ಹೆಸರಿನ ಹಿನ್ನೆಲೆ ತುಂಬಾ ಸೊಗಸಾಗಿದೆ 10-11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಕರಿಂದ ಸ್ಥಾಪಿತಗೊಂಡ ನಗರ ಈ ವಿಜಯಪುರ. 13ನೇ ಶತಮಾನದ ಅಂತ್ಯದ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವದ ಮೇರೆಗೆ ಅವರಿಗೆ ಈ ನಾಡು ಹಸ್ತಾಂತರಿಸಲಾಯಿತು, 14ನೇ ಶತಮಾನದಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಗೊಂಡು ನಂತರ ಅದು ಆದಿಲ್ ಶಾಹಿಯ ಪಾಲಾಯಿತು. 17ನೇ ಶತಮಾನದಲ್ಲಿ ಔರಂಗ್ಜೇಬ್ ಸುಲ್ತಾನನು ನಗರದ ಮೇಲೆ ಆಕ್ರಮಿಸಿ ತನ್ನ ವಶಕ್ಕೆ ಪಡೆದನು ಅಲ್ಲಿಗೆ ಬಹುಮನಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ನಂತರ 1724ರಲ್ಲಿ ಹೈದರಾಬಾದ್ ನಿಜಾಮರ ಪಾಲಾಗಿ, 1760ರಲ್ಲಿ ಮರಾಠ ಪೆಷ್ವಿಯರು ನಿಜಾಮರನ್ನ ಸೋಲಿಸಿ, ತಮ್ಮ ಅಸ್ತಿತ್ವಕ್ಕೆ ಪಡೆದು ಕೊಂಡರು. ತದನಂತರ 3ನೇ ಆಂಗ್ಲ ಮರಾಠ ಯುದ್ಧದಲ್ಲಿ ಮರಾಠರು ಆಂಗ್ಲರ ವಿರುದ್ಧ ಸೋತು ಆಂಗ್ಲರಿಗೆ ಒಪ್ಪಿಸಿದರು. 1848ರಲ್ಲಿ ಬ್ರಿಟಿಷರಿಂದ ಸಾತಾರ ಪ್ರಾಂತಕ್ಕೆ ಒಪ್ಪಿಸಲಾಯಿತು, ತದ ನಂತರದಲ್ಲಿ 1956 ರಲ್ಲಿ ವಿಜಯಪುರ ನಗರವನ್ನ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ನಾಡನ್ನು ಬಯಸಿದವರಿಗೆಲ್ಲಾ ಜಯಭೇರಿಯಾಗಿ ನಾಡು ಅವರದಾಯಿತು, ಹಾಗಾಗಿ ಈ ನಾಡನ್ನ ವಿಜಯಪುರ ದಿ ಸಿಟಿ ಆಫ್ ವಿಕ್ಟರಿ ಅಂತಲೂ ಕರೆಯಲಾಗುತ್ತೆ.ಇಂತಹ ಹಿನ್ನೆಲೆ ಹೊಂದಿದ ಹೆಸರನ್ನು ಈಗಿನ ಅದೇ ಕಾಂಗ್ರೆಸ್ ಸರ್ಕಾರವು ತನ್ನೆಲ್ಲ ಗ್ಯಾರೆಂಟಿಗಳ ವೈಫಲ್ಯವನ್ನು ಮರೆ ಮಾಚಲು ವಿಜಯಪುರ ನಗರವನ್ನ ಬಸವ ನಗರ ಅಥವಾ ಬಸವಪುರ ಎಂದು ಮರು ನಾಮಕರಣ ಮಾಡಲು ಮುಂದಾಗಿದೆ. ಬಸವಣ್ಣ ನವರಿಗೆ ಈ ಕೊಡುಗೆ ಸಮರ್ಪಿಸುವುದಾಗಿ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದು, ಒಳ ನೋಟದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯತೆಯನ್ನು ಮುಚ್ಚಿ ಹಾಕಲು ಈ ರೀತಿಯ ಸರ್ಕಸ್ ಗಳನ್ನು ಮಾಡಲಾಗುತ್ತಿದೆ. ಬಸವಣ್ಣ ನವರ ಹೆಸರಿನಲ್ಲಿ ಅವರು ಹುಟ್ಟಿದ ಮಣ್ಣಿಗೆ ಈಗಾಗಲೇ ನಾವು ಬಸವನ ಬಾಗೇವಾಡಿ ಎಂಬ ನಾಮದಿಂದ ಗೌರವವನ್ನ ನೀಡುತಿದ್ದೇವೆ. ಕಾಂಗ್ರೆಸ್ ಸರ್ಕಾರ ತನ್ನ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದು ತುಂಬಾ ಖಂಡನೀಯ!!! ಬಸವ ನಗರ ಅಥವಾ ಬಸವಪುರ ಎಂದು ಮರು ನಾಮಕರಣ ಮಾಡುವ ಮನಸ್ಸು ಇದ್ದಿದ್ದರೆ 2014ರಲ್ಲಿ ತಮ್ಮದೇ ಆಡಳಿತದಲ್ಲಿ ಮಾಡ ಬಹುದಿತ್ತು!. ಆಗ ಕೇಂದ್ರ ಸರ್ಕಾರದ ಅನುಮತಿ ಪಡೆದು ಬಿಜಾಪುರವನ್ನು ವಿಜಯಪುರ ವನ್ನಾಗಿ ಮರು ನಾಮಕರಣಸಿ. ಇದೀಗ ತಮ್ಮ ಗುಟ್ಟು ಎಲ್ಲಿ ರಟ್ಟಾಗುವುದು ಎಂಬ ಭಯದಲ್ಲಿ ವಿಜಯಪುರವನ್ನ ಬಸವಪುರ ಎಂದು ಮಾಡಲು ಹೊರಟಿದೆ. ಈ ರೀತಿಯ ಕೀಳು ರಾಜಕೀಯವನ್ನು ಬಿಟ್ಟು ರಾಜ್ಯ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ.
ಸಾಕು ಮಹಾರಾಜ್
ಯುವ ಬರಹಗಾರ, ವಿಜಯಪುರ.