ಸಾರ್ವಕಾಲಿಕ ಸತ್ಯ ಸಾರಿದ ಕನಕದಾಸರು.

ಕಾನಾ ಹೊಸಹಳ್ಳಿ ನವೆಂಬರ್.30

ಕನಕದಾಸರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮನುಷ್ಯನು ಜಾತಿ, ಕುಲವನ್ನು ಮೀರಿ ಬೆಳೆಯ ಬೇಕು ಎಂದು ಸಾರ್ವಕಾಲಿಕ ಸತ್ಯ ಸಾರಿದ ಕನಕದಾಸರ ಕೊಡುಗೆ ಅಪಾರ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ ಚೇತನ್ ಹೇಳಿದರು. ಇಲ್ಲಿನ ನಾಡ ಕಚೇರಿಯಲ್ಲಿ 536.ನೇ ಶ್ರೀ ಕನಕ ಜಯಂತಿಯ ಪ್ರಯುಕ್ತ ಭಾವ ಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಕೀರ್ತನಾಕಾರರೂ, ಸಂತರೂ ಎನಿಸಿಕೊಂಡ ಕನಕದಾಸರು ದಾಸ ಸಾಹಿತ್ಯದ ಸುವರ್ಣ ಯುಗದ ಪ್ರವರ್ತಕರು. ಮಾಂಡಲಿಕ ದೊರೆತನದ ಆಡಳಿತಗಾರನಾಗಿ, ಬದುಕಿನ ಸತ್ಯ, ತತ್ವಗಳಿಗೆ ಕಾವ್ಯದ ಸೊಗಡನ್ನು ನೀಡಿ, ಸಾರ್ವಕಾಲಿಕ ಸತ್ಯ ಸಾರಿದ ಶ್ರೇಷ್ಠ ದಾಸರು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ್, ಕಂದಾಯ ಪರಿವೀಕ್ಷಕ ಮುರಳಿ ಕೃಷ್ಣ, ವಿಲೇಜ್ ಅಕೌಂಟ್ ಶ್ರೀನಿವಾಸ ಕೊಂಡಿ, ಗ್ರಾಮದ ಮುಖಂಡರಾದ ಸುಭಾಷ್ ಚಂದ್ರ, ನಡುವೆ ಮನೆ ತಿಪ್ಪೇಸ್ವಾಮಿ, ಮಾರಪ್ಪ, ಲಕ್ಕಜ್ಜಿ ಮಲ್ಲಿಕಾರ್ಜುನ, ಫೋಟೋ ನಾಗರಾಜ, ದಾನ ವೇಂದ್ರ, ಮಂಜುನಾಥ್,ರ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರ ಸ್ವಾಮಿ, ನಾಡ ಕಚೇರಿ ಆಪರೇಟರ್ಗಳಾದ ರಮೇಶ್, ಸಿದ್ದೇಶ್, ಮಂಜುನಾಥ್, ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜಾರಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button