ವಿಶ್ವಗುರು ಜಗಜ್ಯೋತಿ ಬಸವೇಶ್ವರ 892 ನೇ. – ಜಯಂತಿ ಆಚರಣೆ.
ಚಳ್ಳೆ ಕೂಡ್ಲೂರು ಏ.30

ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಸಮಿತಿ ಸಿರುಗುಪ್ಪ ವತಿಯಿಂದ ದಿನಾಂಕ 30/4/2025 ರಂದು ಚಳ್ಳೆ ಕೂಡ್ಲೂರು ಗ್ರಾಮದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರ 892 ಜಯಂತಿಯ ಅಂಗವಾಗಿ ಬಸವೇಶ್ವರ ಇವರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಗೌರವವನ್ನು ಸಲ್ಲಿಸಿದ ನಂತರ ಸಂಜೆ ವಾಣಿಯ ವರದಿಗಾರದ ಶಿವರಾಮ್ ಸಿರಿಗೇರಿ ಇವರು ಬಸವಣ್ಣನವರ ಜನ್ಮ ದಿನಾಚರಣೆಯನ್ನು ಆಚರಿಸುವಂಥವರೆಲ್ಲರೂ ಬಸವಣ್ಣನವರು ಸಮಾನತೆಗಾಗಿ ಜಾತಿ ಭೇದವನ್ನು ತೊಡೆದು ಹಾಕಿ ಮಾನವ ಕುಲ ಎಲ್ಲಾರು ಸಮಾನರಾಗಿ ಬಾಳ ಬೇಕು ಮೇಲು-ಕೀಳು ಎಂಬ ಭಾವನೆಗಳನ್ನು ತೊಡೆದು ಹಾಕಿ ಮನುಷ್ಯ ಮನುಷ್ಯನಲ್ಲೇ ತಾರತಮ್ಯದಿಂದ ಅಸುಯೇ ಮನೋಭಾವನೆ ತೊಡೆದು ಹಾಕಿ ಎಂದು ಬಸವಣ್ಣನವರು ಹೇಳಿದರು. ಈಗ ಬಸವಣ್ಣನವರ ಬಗ್ಗೆ ಮಾತಾಡಲಿಕ್ಕೆ ಮಾತ್ರ ಸೀಮಿತ ವಾಗಬಾರದು ಎಂದು ಹೇಳಿದರು. ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬಸವಣ್ಣನವರು ಮೂಢ ನಂಬಿಕೆ ಕಂದಾಚಾರ ದೇವದಾಸಿ ಪದ್ಧತಿ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡಿ ಸುಧಾರಣೆ ಮಾಡಿದಂತ ವಿಶ್ವಗುರು ಬಸವಣ್ಣನವರನ್ನು ಎಲ್ಲಾರೂ ಅವರನ್ನು ಸ್ಮರಣಿಸಿ ಕೊಂಡು ಅದೇ ರೀತಿಯಾಗಿ ಬುದ್ಧ ಅಂಬೇಡ್ಕರ್ ಜ್ಯೋತಿ ಬಾಪುಲೆ ಸಾವಿತ್ರಿಬಾಯಿ ಇವರನ್ನು ಸಹ ನೆನೆದು ಕೊಳ್ಳಬೇಕಾಗಿದೆ ಎಂದು ಹೇಳಿದರು. ಜಿ.ತಿಮ್ಮಯ್ಯ ತಾಲೂಕ ಅಧ್ಯಕ್ಷರು ಸಿರುಗುಪ್ಪ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಲ್ಲಯ್ಯ ಕರೆಂಟ್ ತೆಕ್ಕಲಕೋಟೆ ಛಲವಾದಿ ಮುಖಂಡರು ಗ್ರಾಮದ ದಲಿತ ಮುಖಂಡರು ಯುವ ಮುಖಂಡರು ಇನ್ನಿತರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.