ಸಮಾನತೆ ಹರಿಕಾರ, ಮಹಾ ಮಾನವತಾವಾದಿ ಬಸವಣ್ಣ ನವರ ಹಾಗೂ ಡಾ, ಬಿ.ಆರ್ ಅಂಬೇಡ್ಕರ್ – ಜಯಂತಿ ಆಚರಣೆ.
ಹೊಸಪೇಟೆ ಮೇ.01

ಈ ಸಂದರ್ಭದಲ್ಲಿ ವಸತಿ ನಿಲಯ ಪಾಲಕರದ ಕೊಟ್ರೇಶ್ ಸರ್ ಅವರ ಮಾತನುಡುತ್ತ ಬಸವಣ್ಣ ಅವರು ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ, ಮಾದರಸ, ತಾಯಿ, ಮಾದಲಂಬಿಕೆ ಭಾರತದ 12 ನೇ. ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ಅವರು ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು. ಮತ್ತು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢ ನಂಬಿಕೆಗಳನ್ನು ನಿರಾಕರಿಸಿದರು, ಬಸವಣ್ಣನ ಅವರು ಅನುಭವ ಮಂಟಪ ಅಥವಾ, “ಆಧ್ಯಾತ್ಮಿಕ ಅನುಭವದ ಭವನ ಸ್ಥಾಪನೆ ಮಾಡಿದರು ಎಂದೂ ಹೇಳಿದರು. ಅದೇ ರೀತಿ SFI ನ ಜಿಲ್ಲಾ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ ಬಸವಣ್ಣನವರು 12 ನೇ. ಶತಮಾನದ ಮಹತ್ವದ ಸಮಾಜ ಸುಧಾರಕರು, ಅಂದು ಈ ಸಮಾಜವನ್ನ ಕಾಡುತ್ತಿದ್ದ ಅನಿಷ್ಟ ಜಾತಿ ವ್ಯವಸ್ಥೆ ಮತ್ತು ಶೋಷಣೆಯ ವಿರುದ್ಧ ಬಂಡಾಯವೆದ್ದು, ವೈದಿಕ ಶಾಹಿ ವ್ಯವಸ್ಥಯ ವಿರುದ್ಧ ಸಮರ ಸಾರಿದರು. ಅನುಭವ ಮಂಟಪ ಸ್ಥಾಪಿಸಿ ಅಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದರು. ಪುರುಷ ಮತ್ತು ಮಹಿಳೆಯರ ನಡುವೆ ಯಾವುದೇ ರೀತಿಯ ತಾರತಮ್ಯ ಇರಬಾರದೆಂದು ಪ್ರತಿಪಾದಿಸಿದು. ಮನುಷ್ಯನ ಬದುಕನ್ನು ಉತ್ತಮ ಗೊಳಿಸಲು ಇವರು ರಚಿಸಿದ ವಚನಗಳು ಇಂದಿಗೂ ನಮ್ಮೆಲ್ಲರಿಗೂ ಮಾರ್ಗದರ್ಶಕ. ಬಸವಣ್ಣ ನುಡಿದಂತೆ ನಡೆದರು, ಕಾಯಕವೇ ಕೈಲಾಸವೆಂದರು. ಇಂದಿನ ಸಂದರ್ಭದಲ್ಲಿ ಬಸವಣ್ಣನವರಿಗೆ ಗೌರವ ಸಲ್ಲಿಸುವುದೆಂದರೆ ಅವರ ಆದರ್ಶಗಳನ್ನು, ತತ್ವಗಳನ್ನು ಸರಿಯಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳುವುದು ಮತ್ತು ನಾವುಗಳು ನಮ್ಮ ಬದುಕಿನಲ್ಲಿ ಅವುಗಳನ್ನು ಅಳವಡಿಸಿ ಕೊಳ್ಳುವುದೆ ಬಸವಣ್ಣನವರ ಜಯಂತಿ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ವಸತಿ ನಿಲಯದ ಸಿಬ್ಬಂದಿಗಳಾದ ಚಂದ್ರಪ್ಪ, ಮಮತಾ, ಮಂಗಳಮ್ಮ, ಶೋಭಾ, ಹಾಗೂ ನಿಲಯದ ವಿದ್ಯಾರ್ಥಿಗಳಾದ, ಪವನ್, ವಿಜಯ, ನವೀನ್, ಕಿರಣ್ ಹಾಗೂ ಇತರೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ