ಪುರಾಣ ಮಹಾಮಂಗಲ ಹಾಗೂ ಜನಜಾಗೃತಿ ಧರ್ಮ ಸಭೆ – ಸಮಾರಂಭ ಕಾರ್ಯಕ್ರಮ ಜರಗಿತು.
ಕಲಕೇರಿ ಮಾ.21

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸುಕ್ಷೇತ್ರ ಕಲಕೇರಿ ಗ್ರಮದ ಶ್ರೀ ಜಗದ್ಗುರು ಪಂಚಾಚಾರ್ಯಾ ಪ್ರಸಿದಂತು ಶ್ರೀ ಗುರು ಮರುಳಾರಾಧ್ಯಾ ಸಂಸ್ಥಾನ ಹಿರೇಮಠದಲ್ಲಿ ಪುರಾಣ ಮಹಾಮಂಗಲ ಹಾಗೂ ಜನಜಾಗೃತಿ ಧರ್ಮ ಸಭೆ ಸಮಾರಂಭ. ಶ್ರಿ ಮದ್ ರಂಬಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ, ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನುರು ಇವರ ಹಸ್ತದಿಂದ ನೂತನ ಅಮೃತ ಶಿಲಾಮೂರ್ತಿಯನ್ನು ಪ್ರತಿಷ್ಠಾಪನೆ ನೆರವೇರಿತು ಇವರು ಎಲ್ಲಾ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಘನ ಅಧ್ಯಕ್ಷತೆ ಪ.ಪೂ. ಶ್ರೀ ಷ. ಬ್ರ. ಸಿದ್ದರಾಮ ಶಿವಾಚಾರ್ಯರು ಗುರು ಮರಳಾರಾಧ್ಯ ಸಂಸ್ಥಾನ ಹಿರೇಮಠ ಈ ಪೂಜ್ಯರು ಈ ಸಂದರ್ಭದಲ್ಲಿ ನಮ್ಮ ಮಠ ಬೆಳೆಯಬೇಕಪ್ಪ ಅಂದರೆ ನನ್ನ ಭಕ್ತರೇ ಕಾರಣ ಎಂದು ನನ್ನ ಭಕ್ತರಿಗೆ ಪ್ರೀತಿಯಿಂದ ಜಗದ್ಗುರುಗಳ ಆಶೀರ್ವಾದದಿಂದ ನನ್ನ ಎಲ್ಲಾ ಭಕ್ತಾದಿಗಳಿಗೆ ಮರಳಾರಾಧ್ಯ ಅವರ ಆಶೀರ್ವಾದ ಸದಾ ಭಕ್ತರ ಮೇಲೆ ಇರಲಿ ಎಂದು ಆಶೀರ್ವಚನ ನೀಡಿದರು.

ಸಾನಿಧ್ಯ ಶ್ರೀ ಷ. ಬ್ರ. ಶಿವಾನಂದ್ ಶಿವಾಚಾರ್ಯರು ಕಟ್ಟ ಮಠ ಸಂಸ್ಥಾನ ಜಳ ಕೋಟಿ . ಶ್ರೀ ಷ. ಬ್ರ. ವೀರಭದ್ರ ಶಿವಾಚಾರ್ಯರು ರಂಭಾಪುರಿ ಶಾಖಾಮಠ ಸಿದ್ದರಬೆಟ್ಟ. ತಾ. ಕೂರಟಗೆರೆ. ಶ್ರೀ ಷ. ಬ್ರ. ಅಭಿನವ ಮುನೀಂದ್ರ ಶಿವಾಚಾರ್ಯರು ಕಟ್ಟಮನಿ ಹಿರೇಮಠ ಹಲಕರ್ಟಿ. ಶ್ರೀ ಷ.ಬ್ರ ಗುರು ಮಡಿವಾಳೇಶ್ವರ ಶಿವಾಚಾರ್ಯರು ಪಂಚರಂಗ ಸಂಸ್ಥಾನ ಗದ್ದಿಗಿ ಮಠ ಕಲಕೇರಿ. ಇನ್ನೂ ಅನೇಕ ಪೂಜ್ಯರು ಸೇರಿದಂತೆ ಹಾಗೂ ಗ್ರಾಮದ ಸಾವಿರಾರು ಭಕ್ತರು ಹಾಗೂ ತಾಯಂದಿರು ಸೇರಿದಂತೆ ಕಾರ್ಯಕ್ರಮ ಅದ್ದೂರಿಯಿಂದ ನೆರವೇರಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ