ತೋಳುಗಳ ದಾಳಿಯಿಂದ ಆಡು, ಕುರಿ ಸಾವು.
ತಡವಲಗಾ ಜೂನ್.30

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಮೂರು ತೋಳುಗಳು ದಾಳಿ ಮಾಡಿ ಒಂದು ಬೆಲೆ ಬಾಳುವ ಆಡು, ಕುರಿಯನ್ನು ಕೊಂದು ಹಾಕಿದ್ದು, ಉಳಿದ ಕುರಿಗಳು ಪ್ರಾಣಾ ಅಪಾಯದಿಂದ ಪಾರಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ, ಈ ಕುರಿಗಳು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ನಾಗಪ್ಪ ಮಲ್ಕಪ್ಪ ಸಾರವಾಡ ಎಂಬುವವರಿಗೆ ಸೇರಿದ ಕುರಿಗಳು ಇವು ಆಗಿವೆ ಎಂದು ತಿಳಿದು ಬಂದಿದೆ. ಇತ್ತಿಚೀನ ದಿನಗಳಲ್ಲಿ ಹೊಲಗಳಲ್ಲಿ ತೋಳಗಳ ಹಾವಳಿ ಮೀತಿ ಮೀರಿದ್ದು, ಕುರಿಗಳ ಮಾರಣ ಹೋಮ ನಡಿವುತ್ತಿವೆ. ಇದರಿಂದ ತೋಳ ಬಂತು ತೋಳ ಎಂಬ ಭಯದಲ್ಲಿ ರಾತ್ರಿ ಸಮಯ ಹೊಲದಲ್ಲಿರುವ ರೈತರು ಭಯ ಭೀತಿಯಲ್ಲಿ ಇದ್ದಾರೆ. ಇಷ್ಟಾದರೂ ತೋಳಗಳನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗದಿರುವುದು ಜನರ ಕಣ್ಣು ಕೆಂಪಾಗಿಸಿದೆ.ಕುರಿಗಾರರು ತತ್ತರ ತೋಳಗಳ ಹಾವಳಿ ಕುರಿಗಾರರ ನಿದ್ದೆಗೆಡಿಸಿದೆ. ಜೊತೆಗೆ ಅವರ ಬದುಕಿನ ಆದಾಯ ನುಂಗಿ ಹಾಕಿವೆ. ಮತ್ತೆ ತೋಳ ದಾಳಿ ಭೀತಿಯಲ್ಲಿ ಜಮೀನುಗಳಲ್ಲಿ ರೈತರು ವಾಸ ಮಾಡುವದು ಕಷ್ಟವಾಗಿದೆ ಎನ್ನುತ್ತಾರೆ ಕರಿ ಕಳೆದುಕೊಂಡ ರೈತ ನಾಗಪ್ಪ ಮಲ್ಕಪ್ಪ ಸಾರವಾಡ, ನೊಂದ ರೈತನಿಗೆ ಸಂಬಂಧಿಸಿದ ಇಲಾಖೆಯಿಂದ ಸೂಕ್ತ ಪರಿಹಾರ ಸಿಗಲಿ ಎಂಬುದೇ ನಮ್ಮ ಪತ್ರಿಕೆಯ ಆಶಯ ಆಗಿದೆ.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ ಬಿ.ಹರಿಜನ.ಇಂಡಿ. ವಿಜಯಪುರ.