ಸಚಿವ ಅಶ್ವಥ್ ನಾರಾಯಣ,ಕೊಲೆ ಮಾಡುವ ಹೇಳಿಕೆ ವಿರುದ್ಧ ಬೃಹತ್ ಪ್ರತಿಭಟನೆ ….!
ತರೀಕೆರೆ (ಫೆ, 20 ) :
ಬಿಜೆಪಿಯ ಭ್ರಷ್ಟಾಚಾರ ಮುಚ್ಚಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯನವರನ್ನು ಕೊಲೆ ಮಾಡಿ ಎಂಬ ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿಧಾನಸಭಾ ಆಕಾಂಕ್ಷಿ ಯಾದ ಲೋಕೇಶ್ ತಾಳಿಕಟ್ಟೆ ರವರು ತರೀಕೆರೆ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಂವಿಧಾನ ವಿರೋಧಿ ಮತ್ತು ಗೂಂಡಾ ಮನಸ್ಥಿತಿಯ ಅಶ್ವಥ್ ನಾರಾಯಣ ಅವರ ಮೇಲೆ ಯಾವ ಕ್ರಮವನ್ನು ತೆಗೆದುಕೊಳ್ಳದ ಬಿಜೆಪಿ ಸರ್ಕಾರವು ನೇರವಾಗಿ ಅವರ ಹೇಳಿಕೆಯನ್ನು ಸಮರ್ಥಿಸುವ ಮೂಲಕ ತಾನು ಈ ದುಷ್ಕೃತ್ಯದಲ್ಲಿ ಭಾಗಿಯಾಗಿದೆ.
ಇಡೀ ಬಿಜೆಪಿ ಸಿದ್ದರಾಮಯ್ಯನವರ ಕೊಲೆಗೆ ಸಂಚುರೂಪಿಸುತ್ತಿರುವಂತೆ ಕಾಣುತ್ತಿದೆ. ಬಿಜೆಪಿಯವರು ಸಿ.ಟಿ ರವಿ , ಅಶ್ವಥ್ ನಾರಾಯಣ ಮುಂತಾದವರನ್ನು ಬಳಸಿಕೊಂಡು ಮನುವಾದದಂತಹ ಅಮಾನುಷ ಸಿದ್ಧಾಂತವನ್ನು ಹೇರಲು ಹೊರಟಿದ್ದಾರೆ. ಅಧಿಕಾರಕ್ಕಾಗಿ ಅಪಹಪಿಸುವ ಕೊಳಕು ನಾಯಕರು ಎಂಥಾ ಜೀತ ಬೇಕಾದರೂ ಮಾಡಲು ತಯಾರಿದ್ದಾರೆ. ಇವರ ಬಾಯಿಯಲ್ಲಿ ಬೆಂಕಿಯನ್ನು, ಮೆದುಳಿನಲ್ಲಿ ವಿಷವನ್ನು ತುಂಬಿಕೊಂಡು ಜೀವಂತ ಬಾಂಬು ಮಾಡಿ ತಿರುಗಾಡಲು ವೇದಿಕೆ ಕಲ್ಪಿಸುತ್ತಾರೆ.
ಡಿಸೆಂಬರ್ 30ರಂದು ಮಂಡ್ಯದಲ್ಲಿ ಇವರೆಲ್ಲ ಸೇರಿಕೊಂಡು ಸುಳ್ಳುಗಳ ವಿಷವನ್ನು ಕಕ್ಕಿದರು. ನಾಯಕರು ಎಂದು ಹೇಳಿ ಇಡೀ ಸಮುದಾಯವನ್ನು ದುರುಳೀಕರಿಸಲು ಪ್ರಯತ್ನಿಸಿದರು. ಮಂಡ್ಯದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ಅವರು ಟಿಪ್ಪು ಸುಲ್ತಾನನನ್ನು ಒಡೆದು ಹಾಕಿದ ಹಾಗೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.
ಕ್ಷಣವು ಇರಲು ಅರ್ಹರಲ್ಲ, ಬಿಜೆಪಿಯವರ ವರ್ತನೆ ಚುನಾವಣೆಗೆ ಮೊದಲೇ ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ.ಸಮಾಜದಲ್ಲಿ ಶಾಂತಿಯನ್ನು ಕದಡುವ ಇವರನ್ನು ವಿಚಾರಣೆಗೊಳಪಡಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು ತರೀಕೆರೆ ತಾಲೂಕು ಕುರುಬ ಸಮಾಜದ ಗುರು ರೇವಣಸಿದ್ದೇಶ್ವರ ಸಂಘದ ನೇತೃತ್ವದಲ್ಲಿ, ತಾಲೂಕು ಮುಸ್ಲಿಂ ಸಮಾಜ ಮತ್ತು ದಲಿತ ಸಂಘಟನೆಯು ಸೇರಿಕೊಂಡಂತೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿ ಬಳಗ, ಸಂಯುಕ್ತ ಆಶ್ರಯದಲ್ಲಿ ಸಿದ್ದರಾಮಯ್ಯನವರನ್ನು ಕೊಲೆ ಮಾಡುವ ಹೇಳಿಕೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ನಗರ ಅಧ್ಯಕ್ಷರಾದ ಟಿ.ಎಸ್ ರಮೇಶ್, ಕುರುಬ ಸಮಾಜದ ಅಧ್ಯಕ್ಷರಾದ ಹಾಲು ವಜ್ರಪ್ಪ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಎಸ್.ಆರ್ ಮಂಜುನಾಥ್, ಮೌಸಿನ್ ಪಾಷಾ, ಅಕ್ಬರ್ ಭಾಷಾ, ಹಾಲೇಶ, ಚಂದ್ರಶೇಖರ ರವರು ಉಪಸ್ಥಿತರಿದ್ದರು.
ವರದಿ :- N. ವೆಂಕಟೇಶ್ , ತರೀಕೆರೆ …