“ಬಾಳಪಯಣ ಹೋರಾಟನಿತ್ಯ ನಿರಂತರ ಗೆಲವು ಸೋಲು”…..

ಯೋಗಿಯಾಗಲು ಆಧ್ಯಾತ್ಮಿಕ
ಧಾರ್ಮಿಕಕತೆಯ ಯೋಗಬೇಕು
ತ್ಯಾಗಿಯಾಗಲು ನಿಸ್ವಾರ್ಥಿ ಯಾಗಬೇಕು
ಭೋಗಿಯಾಗಲು ದೈವಾನುಗೃಹ ವರ ಪಡೆದಿರಬೇಕು
ಸೋಗಿಯಾಗಲು ಕಲಾವಿದನಾಗಿರ ಬೇಕು
ನಿರೋಗಿಯಾಗಲು ಆಹಾರವೇ
ಔಷಧಿವೆಂದು ಅರಿತಿರಬೇಕು
ಬಾಳಪಯಣ ಹೋರಾಟ
ನಿತ್ಯ ನಿರಂತರ ಸೋಲು ಗೆಲವು
“ದುರಾಸೆ ಚಿಂತೆಗಳ” ಅವಳಿ ಜವಳಿ
ರಕ್ಕಸರ ಸ್ನೇಹ ಮಾಡಬಾರದು
ವಿಶ್ವವು ಶೂನ್ಯತೆಯ ಆಕಾರದಲಿರಲು
ಪಾತ್ರ ಯಾವುದಾದರೇನು
ಸೃಷ್ಟಿಯ ಒಂದಾಗಿ ಉತ್ತಮತನದಲಿ
ಬಾಗಿಯಾಗುವ ಭಾಗ್ಯತನವಿರ ಬೇಕು
ಆಗುವದಾದರೆ ಮೊದಲು ಮನುಜ
ಮತದವನಾಗು ಇದುವೇ ಜಗದ ತತ್ವ
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.