ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಜಾತಿ ಜನ ಗಣತಿಯ ಸಮೀಕ್ಷಾ ವರ್ಗೀಕರಣದಲ್ಲಿ “ಮಾದಿಗ” ಎಂದೆ ಬರೆಯಿಸಿ – ಕರಿಯಣ್ಣನವರ.
ಬಾಗಲಕೋಟೆ ಮೇ.04

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಮನೆ ಮನೆ ಸಮೀಕ್ಷೆ ಹಾವೇರಿ ಜಿಲ್ಲೆ, ಗದಗ ಜಿಲ್ಲೆ, ಧಾರವಾಡ ಜಿಲ್ಲೆ, ಬೆಳಗಾವಿ ಜಿಲ್ಲೆ, ಬಾಗಲಕೋಟೆ ಜಿಲ್ಲೆ, ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಾತಿ ಸರ್ಟಿಫಿಕೇಟ್ಗಳಲ್ಲಿ ಮಾದರ ಅಂತ ಇದ್ದು ಸಮೀಕ್ಷೆಯಲ್ಲಿ ಅವರು ಬರೆಸ ಬೇಕಾದ ಜಾತಿಯ ಬಗ್ಗೆ ಸಮುದಾಯದ ಹಿರಿಯರಾದ ಸನ್ಮಾನ್ಯ ಶ್ರೀ ಮಹದೇವ್ ಕರಿಯಣ್ಣನವರ ಬ್ಯಾಡಗಿ ರವರು ಒಂದು ಆದೇಶ ಮಾಡಿದ್ದಾರೆ ಅವರ ಆಜ್ಞೆ ಪಾಲಿಸೋಣ ಬಿಡುವು ಮಾಡಿ ಕೊಂಡು ಓದಿ ಅನುಸರಿಸಿ ಆತ್ಮೀಯ ಮಾದಿಗ ಸಮುದಾಯದ ರಾಜಕೀಯ ನಾಯಕರೇ ಹಾಗೂ ನೌಕರ ಬಂಧುಗಳೇ ಯುವ ಸಹೋದರರೇ ಇದೇ ದಿನಾಂಕ:- 05.05.2025 ರಿಂದ 17.05.2025 ರ ವರೆಗೆ ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಸಮೀಕ್ಷಾ ಕಾರ್ಯ ಆರಂಭವಾಗಲಿದೆ ನಮ್ಮ ಸಮುದಾಯದ ನಾಯಕರುಗಳು ಸುಮಾರು 40 ವರ್ಷಗಳಿಂದ ನಿರಂತರವಾಗಿ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಮನೆ ಮಠ ತೊರೆದು ಹೋರಾಟ ಮಾಡಿದ್ದಾರೆ. ಅದೆಷ್ಟೋ ಜನ ತಮ್ಮ ಅಮೂಲ್ಯವಾದ ಜೀವವನ್ನೇ ಬಲಿ ಕೊಟ್ಟಿದ್ದಾರೆ ಹೋರಾಟದ ಸಂದರ್ಭದಲ್ಲಿ ಅದೆಷ್ಟೋ ಜನ ಪೋಲೀಸರ ಲಾಠಿ ಏಠಿಗೆ ತಮ್ಮ ದೇಹವನ್ನು ಒಡ್ಡಿದ್ದಾರೆ. ಆದರೆ ಇದೀಗ ನಮ್ಮ ನ್ಯಾಯಯುತ ಹೋರಾಟಕ್ಕೆ ಜಯ ದೊರೆಯುವ ಕಾಲ ಬಂದೊದಗಿದೆ ಇದು ಮಾದಿಗರ ಅಂತಿಮ ಧರ್ಮ ಯುದ್ದ ಎಂದೇ ಭಾವಿಸ ಬೇಕಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸೈನಿಕರಂತೆ ಸಮರೋಪಾದಿಲ್ಲಿ ಈ ಸಮೀಕ್ಷಾ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳಬೇಕಾಗಿದೆ ಮಾದಿಗರ ಓಣಿ ಅಥವಾ ಕೇರಿಗಳಿಗೆ ಹೋಗಿ ಜಾತಿ ಪರಿಶಿಷ್ಟಜಾತಿ ಉಪ ಜಾತಿ “ಮಾದಿಗ” (ಕ್ರ. ಸಂ: 061) ಎಂದು ಸ್ಪಷ್ಟವಾಗಿ ಬರೆಸಲು ನಮ್ಮ ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ತುರ್ತು ಆಗಬೇಕು ದಯಮಾಡಿ ಯಾವುದೇ ಕಾರಣಕ್ಕೂ ಈ ಕೆಳಗಿನ ಅಂಶಗಳನ್ನು ಬರೆಯಿಸದಂತೆ ಕಾಳಜಿ ವಹಿಸಿ AK (ಆದಿ ಕರ್ನಾಟಕ) AD (ಆದಿದ್ರಾವಿಡ) AA (ಆದಿ ಆಂಧ್ರ) ಹರಿಜನ ಮಾದರ ಇದು ನಮ್ಮೆಲ್ಲರ ಕೊನೆಯ ಹೋರಾಟ. ಆದ್ದರಿಂದ ಯಾರು ಕೂಡ ನಿರ್ಲಕ್ಷ್ಯ ವಹಿಸಬೇಡಿ. ದ್ವೇಷ, ಅಸೂಯೆ, ಒಳ ಜಗಳ, ವೈಮನಸ್ಸು ತೊರೆದು ಒಂದು ವಾರಗಳ ಕಾಲ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಈ ಪರಿಶಿಷ್ಟ ಜಾತಿ ಗಣತಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿ ಕೊಳ್ಳಿ. ನಮ್ಮ ಮಕ್ಕಳ ಮತ್ತು ಸಮುದಾಯದ ಭವಿಷ್ಯದ ಬದುಕಿಗಾಗಿ ಇದೊಂದು ಸಾರಿ ಶ್ರಮಪಟ್ಟು ಈ ಕೆಲಸ ಮಾಡಿ 061-“ಮಾದಿಗ” ಎಂದು ಮಾತ್ರ ಬರೆಯಿಸಿ ಎಂದು ಹೃದಯದ ಭಾವನೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನೂರ.ಸಿ.ಹಲಗಿ.ಶಿರೂರು. ಬಾಗಲಕೋಟೆ