ಶ್ರಾವಣ ಮಾಸದ ನಿಮಿತ್ಯ ಆಗಸ್ಟ್ 5. ರಿಂದ ಜಪ ತಪದ ಜೊತೆಗೆ ಮಹಾ ಪೂಜೆ ಅನುಷ್ಠಾನ ಜರುಗಲಿದೆ.
ಗುಂಡಕನಾಳ್ ಆ.04

ತಾಳಿಕೋಟೆ ತಾಲೂಕಿನ ಗುಂಡಕನಾಳ್ ಗ್ರಾಮದ ಕಾಳೆ ಬೆಳಗುಂದೀ ಕಟ್ಟಿಮನಿ ಕರಡಕಲ್ಲ ಬಿಲ್ಲಮ ರಾಜನ ಗುರುಗಳ ವಂಶಜರಾದ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಮಠದ ಪಟ್ಟಾದ್ಯಕ್ಷರು ಶ್ರಾವಣ ಮಾಸದ ನಿಮಿತ್ಯ ಆಗಸ್ಟ್ 5 ರಿಂದ ಜಪ ತಪದ ಜೊತೆಗೆ ಮಹಾ ಪೂಜೆ ಅನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀ ಮಠದ ಮೂಲಗಳು ತಿಳಿಸಿವೆ.ಕಳೆದ ವರ್ಷ ಇದೇ ಶ್ರಾವಣ ಮಾಸದ ನಿಮಿತ್ಯ ತೆಲಂಗಾಣ ರಾಜ್ಯದ ಕೊಲ್ಲಿಪಾಕಿಯ ಶ್ರೀ ಜಗದ್ಗುರು ರೇಣುಕಾ ಚಾರ್ಯರ ಉದ್ಭವಿಸಿದ ಸ್ಥಳದಲ್ಲಿ ಒಂದು ತಿಂಗಳ ಮೌನ ಅನುಷ್ಠಾನ ಮಾಡಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶರಣಯ್ಯ ಬೇನಾಳಮಠ ಕಲಕೇರಿ.