ಜಲಧಾರೆ ಯೋಜನೆಯ ಭೂಮಿ ಪೂಜೆಗೆ ಚಾಲನೆ ನೀಡಿದ – ಗ್ರಾಂ.ಪ ಅಧ್ಯಕ್ಷ, ಉಪಾಧ್ಯಕ್ಷರು.
ಕಲಕೇರಿ ಮೇ.08

ಕಲಕೇರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಮನೆ ಮನೆಗೆ ಗಂಗೆ ಶುದ್ಧ ಕುಡಿಯುವ ನೀರಿನ ಪೂರೈಸುವ ಜಲಧಾರೆ ಯೋಜನೆ ಅಡಿಯಲ್ಲಿ ಸುಮಾರು ಕಲಕೇರಿಯಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ಕಾಮಗಾರಿ ನಿರ್ಮಾಣ ಇಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭೂಮಿ ಪೂಜೆ ಕಾಮಗಾರಿಗೆ ಚಾಲನೆ ನೀಡಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಪರಶುರಾಮ್ ಬೇಡರ. ಗ್ರಾಮ ಪಂಚಾಯಿತಿಯ ಸದಸ್ಯರು ಅನಿಲ್ ಬಡಿಗೇರ್. ಸುಧಾಕರ್ ಅಡಿಕಿ ಇವರು ಈ ಸಂದರ್ಭದಲ್ಲಿ ನಮ್ಮ ಕಲಕೇರಿ ಗ್ರಾಮದಲ್ಲಿ ಪ್ರತಿಯೊಂದು ವಾರ್ಡಗಳಿಗೆ ಪೈಪ್ ಲೈನ್ ಮುಖಾಂತರ ನೀರು ಬರುವುದು ಮತ್ತು ಕುದುರೆ ಗೊಂಡ ಕೆರೆಯಲ್ಲಿ ಬಾಯಿ ಯಿಂದ ಇನ್ನೂ ಎರಡು ಮೂರು ದಿನದಲ್ಲಿ ಕಲಕೇರಿ ಗ್ರಾಮಕ್ಕೆ ಆ ನೀರು ಕೂಡ ಬರುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಭೀಮಣ್ಣ ವಡ್ಡರ್. ಹಾಜಿ ಪಾಷಾ ಜಾಗಿರ್ದಾರ್. ಚಾಂದ್ ಪಾಷಾ ಹವಾಲ್ದಾರ್. ದೇವೇಂದ್ರ ಬಡಿಗೇರ್. ಕುತುಬುದ್ದಿನ್ ಹೊಸಮನಿ. ಮಲ್ಕಪ್ಪ ಭಜಂತ್ರಿ. ಹುಸೇನ್ ನಾಯ್ಕೋಡಿ. ಇರಗಂಟಿ ಬಡಿಗೇರ್. ನಬಿಲಾಲ್ ನಾಯ್ಕೋಡಿ. ಎಲ್ಲಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು 2 ಲಕ್ಷ ಲಿಟರ್ ಟ್ಯಾಂಕ್ ಭೂಮಿ ಪೂಜೆಯನ್ನು ಮಾಡಿ ಕೆಲಸ ಪ್ರಾರಂಭ ಗೊಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ