ಮಾದಿಗರ ಸ್ವಾಭಿಮಾನ ಸಮಾವೇಶದ ಕ್ರಾಂತಿಕಾರಿ ರಥಯಾತ್ರೆಯನ್ನು – ಅದ್ಧೂರಿಯಾಗಿ ಸ್ವಾಗತಿಸಿದರು.
ಮಾನ್ವಿ ಮೇ.10

ಒಳ ಮೀಸಲಾತಿ ಜಾರಿಯ ಐಕ್ಯತೆಯ ಹೋರಾಟದ ಕ್ರಾಂತಿಕಾರಿ ರಥಯಾತ್ರೆಯು ರಾಯಚೂರು ಜಿಲ್ಲೆಯ ಮಾನ್ವಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಮಾದಿಗ ಸಮಾಜದ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
ಮಾದಿಗರ ಸ್ವಾಭಿಮಾನ ಸಮಾವೇಶ ಕಾರ್ಯಕ್ರಮವನ್ನು ಭಾಸ್ಕರ್ ಪ್ರಸಾದ್ ಉದ್ಘಾಟಿಸಿ ಮಾತನಾಡಿ, ಸದಾಶಿವ ವರದಿಯ ಪ್ರಕಾರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಬೆಂಗಳೂರಲ್ಲಿ ಹೋರಾಟ ನಡೆದಾಗ ಪರಿಶಿಷ್ಟ ಜಾತಿಯ ಜನಾಂಗದವರೆಲ್ಲರೂ ಸಾಥ್ ಕೊಟ್ಟಿದ್ದರು.
ಆದರೆ ಯಾವಾಗ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿ ಮಾಡಿ ಎಂದು ಆದೇಶ ಹೊರಡಿಸಿತೋ ಹೋರಾಟಕ್ಕೆ ಸಾಥ್ ಕೊಟ್ಟವರು ಎಲ್ಲರೂ ದೂರ ಸರಿದರು ಎಂದು ಲೇವಡಿ ಮಾಡಿದರು.
ಕ್ರಾಂತಿಕಾರಿ ಹೋರಾಟಗಾರ ಅಂಬಣ್ಣ ಅರೋಲಿಕರ್ ಮಾತನಾಡಿ, ಕಳೆದ ಮೂವತ್ತು ವರ್ಷದಿಂದ ಪರಿಶಿಷ್ಟ ಜಾತಿಯಲ್ಲಿಯೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಹೋರಾಟ ಮಾಡಲಾಗಿದೆ. ಆದರೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ನಮ್ಮವರೆ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ನಡೆಸಿದ ಉದಾಹರಣೆಗಳಿಂದ ಇಂದು ಸಮೀಕ್ಷೆ ನಡೆಯುತ್ತಿದೆ ಎಂದರು.
ಚಲನ ಚಿತ್ರ ನಟ ಚೇತನ್ ಮಾತನಾಡಿ, ಶೋಷಿತರ ಜನಾಂಗದಲ್ಲಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಕ್ರಾಂತಿಕಾರಿ ರಥಯಾತ್ರೆಯು ಮಾನ್ವಿಗೆ ಆಗಮಿಸಿದ್ದು, ಹೀಗಾಗಿ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ