ಮಹಾತ್ಮರ ಜೀವನ ಚರಿತ್ರೆಯ ಅಧ್ಯಯನ ದಿಂದ ಬದುಕಿಗೆ ಭರವಸೆ – ಶ್ರೀಮತಿ ಹೆಚ್.ಲಕ್ಷ್ಮೀದೇವಮ್ಮ ಅನಿಸಿಕೆ.
ಚಳ್ಳಕೆರೆ ಮೇ.20

ಮಹಾತ್ಮರ ಜೀವನ ಚರಿತ್ರೆಯ ಅಧ್ಯಯನ ದಿಂದ ಬದುಕಿಗೆ ಭರವಸೆ ಸಿಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ ತಿಳಿಸಿದರು. ತ್ಯಾಗರಾಜ ನಗರದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಆಯೋಜಿಸಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮವನ್ನು ಯತೀಶ್.ಎಂ ಸಿದ್ದಾಪುರ ನಡೆಸಿ ಕೊಟ್ಟರು.

ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ, ಎಂ ಗೀತಾ ನಾಗರಾಜ್, ಟಿ.ಎಂ.ವಿಜಯಕಲಾ ಗುರುಲಿಂಗಪ್ಪ, ಗೀತಾ ಸುಂದರೇಶ್, ಸೌಮ್ಯ ಪ್ರಸಾದ್, ಅನ್ವಿತಾ, ಲಕ್ಷ್ಮೀದೇವಮ್ಮ, ನಾಗರತ್ನಮ್ಮ, ಶಾರದಾಮ್ಮ, ಶುಭ ಸೋಮಶೇಖರ್, ರಾಘವೇಂದ್ರ, ಅನುಸೂಯ, ಸರ್ವಮಂಗಳ, ಚಂದ್ರಕಲಾ, ಸುನೀತ, ಸರಸ್ವತಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.