ಕೊಟ್ಟೂರು ತಾಲೂಕಿನಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ.
ಕೆ. ಅಯ್ಶನಹಳ್ಳಿ ಅಕ್ಟೋಬರ್.19

ಭಾರತಾಂಬೆಯ ಸೇವೆಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗೋಣ ಎಂದು ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಎಚ್.ವಿಜಯಕುಮಾರ್ ಅವರು ಹೇಳಿದರು.ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹಾಗೂ ನೆಹರು ಯುವ ಕೇಂದ್ರ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮದ ನಿಮಿತ್ತ ಮಣ್ಣು ಸಂಗ್ರಹ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರದ ಮಂತ್ರಾಲಯದ ಆದೇಶದಂತೆ ತಾಲೂಕಿನ ಎಲ್ಲೆಡೆ ಆ.15.ರಂದು ವೀರ ಯೋಧರಿಗೆ ಗೌರವ ಸಲ್ಲಿಸಲು ಶಿಲಾಫಲಕ ನಿರ್ಮಾಣ, ನಿವೃತ್ತ ಯೋಧರಿಗೆ ಸನ್ಮಾನ, ಅಮೃತ ಸರೋವರದ ಕಟ್ಟೆ ಮೇಲೆ ಧ್ವಜಾರೋಹಣ, ಅಮೃತ ವಾಟಿಕ, ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮದ ನಿಮಿತ್ತ ಪ್ರತೀ ಗ್ರಾ.ಪಂ ನಿಂದ ಮಣ್ಣು ಸಂಗ್ರಹಿಸುವುದು ಸೇರಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಎರಡನೇ ಹಂತದಲ್ಲಿ ತಾಲೂಕಿ ನೆಲ್ಲಡೆ ಸಂಗ್ರಹಿಸಿದ ಮಣ್ಣನ್ನು ತಾಲೂಕು ಮಟ್ಟದ ಕಾರ್ಯಕ್ರಮದ ಮೂಲಕ ನೆಹರು ಯುವ ಕೇಂದ್ರದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು-ನನ್ನ ದೇಶ ಕಾರ್ಯಕ್ರಮಕ ಹಮ್ಮಿಕೊಳ್ಳಲಾಗಿದೆ. ಈ ನೆಲದ ಮಣ್ಣನ್ನು ಬಹಳ ಗೌರಯುತವಾಗಿ ಕಳಿಸಿ ಕೊಡಬೇಕಾಗಿ ಇರುವುದರಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ನೆಹರು ಯುವ ಕೇಂದ್ರದವರಿಗೆ ನೀಡಲಾಗುವುದು. ಇಲ್ಲಿಂದ ಅವರು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಕಳಿಸಿ ಕೊಡುತ್ತಾರೆ ಎಂದು ತಿಳಿಸಿದರು.ಮೆರುಗು ಹೆಚ್ಚಿಸಿದ ಜಾಥಾ: ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಿಂದ ಆರಂಭಗೊಂಡ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಸಮುದಾಯ ಭವನದ ಮುಂಭಾಗದಲ್ಲಿನ ಮೈದಾನಕ್ಕೆ ತಲುಪಿ ಕೊನೆಗೊಂಡಿದೆ. ಈ ವೇಳೆ ಪಂಚಪ್ರಾಣ ಪ್ರತಿಜ್ಞೆ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಹೇಮಾಕ್ಷಿ ರೇಣುಕಪ್ಪಗ್ರಾಮ ಪಂಚಾಯಿತಿ ಅಧ್ಯಕ್ಷರು, ಜೆ.ಸುಮಾ ನಿಜಲಿಂಗಪ್ಪ ಉಪಾಧ್ಯಕ್ಷರು, ಮಾಜಿ ಉಪಾಧ್ಯಕ್ಷರಾದ ಕೆ.ಕೊಟ್ರೇಶ್, ಪಿಡಿಒ ರಾಘವೇಂದ್ರ ಅಣಜಿ, ತಾಂತ್ರಿಕ ಸಂಯೋಜಕ ಶ್ರೀಕಾಂತ, ಐಇಸಿ ಸಂಯೋಜಕ ಪ್ರಭುಕುಮಾರ್ ಯು, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರಾದ ವೀರೇಶ್, ಗ್ರಾಪಂ ಸದಸ್ಯರಾದ ವೃಷಭೇಂದ್ರ, ಕೊಟ್ರೇಶ್ ಕೆ, ತಾಂತ್ರಿಕ ಸಹಾಯಕರಾದ ಶ್ರೀಧರ್, ಚಂದ್ರಶೇಖರ್, ಬಿಲ್ ಕಲೆಕ್ಟರ್ ಪ್ರವೀಣ್, ಗ್ರಾಮದ ಮುಖಂಡರು, ಗ್ರಾಮಸ್ಥರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ, ಬಿಎಫ್ ಟಿ, ಮೇಟಿಗಳು, ಕೂಲಿಕಾರರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು