ಪುನಃ ಆರಂಭಗೊಂಡ ಹಳೇ ಮಾರ್ಗಗಳಿಗೆ — ಹೊಸ ಬಸ್ ಗಳು. ಚಾಲನೆ ನೀಡಿದ ಶಾಸಕ ಡಾll ಎನ್.ಟಿ ಶ್ರೀನಿವಾಸ್.

ಕೊಟ್ಟೂರು ಜುಲೈ.1

ವಿಜಯನಗರ ಜಿಲ್ಲೆಯ ಕೂಡ್ಲಿಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೂಡ್ಲಿಗಿ ಘಟಕದಿಂದ, ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ. ಹಳೇ ಮಾರ್ಗಗಳನ್ನು ಪುನಃ ಪ್ರಾರಂಭಿಸಲಾಗಿದ್ದು, ಹೊಸ ಮಾರ್ಗವೊಂದು ಪ್ರಾರಭಿಸಲಾಗಿದೆ. ಜೂ30ರಂದು ಘಟಕದ ಬಸ್ ನಿಲ್ದಾಣದಲ್ಲಿ, ಮೂರು ಮಾರ್ಗಗಳಿಗೆ ಹೊಸ ಬಸ್ ಗಳನ್ನು ಕಲ್ಪಿಸಲಾಗಿದ್ದು ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರು ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದರು. ಘಟಕದಿಂದ ತೆರಳುತಿದ್ದ ಹಳೇ ಮಾರ್ಗಗಳಾದ, ಕೂಡ್ಲಿಗಿ ಯಿಂದ ನಾಣ್ಯಾಪುರ ಗ್ರಾಮದ ಮೂಲಕ ಹಗರಿಬೊಮ್ಮನಹಳ್ಳಿಗೆ. ಹಾಗೂ ಕೂಡ್ಲಿಗಿ ಯಿಂದ ಕುಮತಿ ಗ್ರಾಮ ಮಾರ್ಗಕ್ಕೆ, ಬಸ್ ಸಂಚರಿಸಲಿದ್ದು ಪುನಃ ಸಂಪರ್ಕ ಆರಂಭಿಸಲಾಗಿದೆ. ಕೂಡ್ಲಿಗಿ ಯಿಂದ ಮೊಳಕಾಲ್ಮೂರು ಗೆ, ಸಂಪರ್ಕ ಸಾಧಿಸುವ ಮಾರ್ಗ ಹೊಸದಾಗಿ ಪ್ರಾರಂಭಿಸಲ‍ಾಗಿದೆ.

ಹಳೇ ಎರೆಡು ಮಾರ್ಗಗಳಿಗೆ ಹಾಗೂ ಒಂದು ಹೊಸ ಮಾರ್ಗಕ್ಕೆ, ಘಟಕಕ್ಕೆ ಇತ್ತೀಚೆಗೆ ಬಂದಿರುವ ಹೊಸ ಬಸ್ ಗಳನ್ನು ಕಲ್ಪಿಸಲಾಗಿದೆ.ಈ ಮೂರು ಮಾರ್ಗ ಗಳಲ್ಲಿ ಹೊಸ ಬಸ್ ಗಳು ಸಂಚರಿಸಲಿದ್ದು, ಈ ಮೊದಲು ನಿಗದಿಪಡಿಸಿದ್ದ ಸಮಯಕ್ಕೆ ಘಟಕದ ಬಸ್ ನಿಲ್ದಾಣದಿಂದ ಆಯಾ ಮಾರ್ಗಗಳಿಗೆ ತೆರಳಲಿವೆ. ಶಾಸಕರಾದಡಾ”ಎನ್.ಟಿ.ಶ್ರೀನಿವಾಸ್ ರವರು ಚಾಲನೆ ನೀಡಿದರು. ತಹಶಿಲ್ದಾರರಾದ ಟಿ.ಜಗದೀಶ, ಘಟಕಾಧಿಕಾರಿ ಗುರ್ಲಿಂಗಪ್ಪ, ಘಟಕದ ಸಿಬ್ಬಂದಿ ಹಾಗೂ ಘಟಕದ ಕುಶಲ ಕಾರ್ಮಿಕ ವರ್ಗದವರು. ಹಾಜರಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯರು, ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಜನ ಪ್ರತಿನಿಧಿಗಳು. ಹಿರಿಯ ನಾಗರಿಕರು , ಹಾಗೂ ಶಾಸಕರ ಹಿತೈಷಿಗಳು ಸಮಾಜ ಸೇವಕರು,ಕಾಂಗ್ರೇಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.ಘಟಕದಿಂದ ಕೆಲ ವರ್ಷಗಳಿಂದ ರಾತ್ರಿ ಸಮಯದಲ್ಲಿ ಸಂಚರಿಸುತ್ತಿದ್ದ, ಕೂಡ್ಲಿಗಿ ಗುಡೇಕೋಟೆ ರಾಂಪುರ ಬೆಂಗಳೂರು ಮಾರ್ಗ. ಸದ್ಯ ಕೆಲ ತಿಂಗಳಿಂದ ಸ್ಥಗಿತಗೊಂಡಿದ್ದು, ಅದನ್ನು ಪುನಃ ಆರಂಭಿಸಬೇಕಿದೆ. ಈ ಮಾರ್ಗ ಸಂಸ್ಥೆಗೆ ನಿರೀಕ್ಷಿತ ಆದಾಯ ನೀಡುತ್ತಿದೆ, ಮತ್ತು ಈ ಮಾರ್ಗ ಗ್ರಾಮೀಣ ಜನತೆಗೆ ಹೆಚ್ಚು ಅನುಕೂಲಕರವಾಗಿದೆ ಸಂಬಂದಿಸಿದಂತೆ ಘಟಕದ ಅಧಿಕಾರಿಗಳಲ್ಲಿ ಚರ್ಚಿಸಿದ್ದು, ಅವರು ಶೀಘ್ರವೇ ಬಸ್ ಸಂಚಾರ ಪುನಃ ಆರಂಭಿಸಲು ಕ್ರಮ ಜರುಗಿಸಲಿದ್ದಾರೆ, ಎಂಬ ವಿಶ್ವಾಸ ತಮಗಿದೆ ಎಂದು ಕ.ಕ.ರ.ಸಾ.ಸಂಸ್ಥೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ, ದಿಬ್ಬದಹಳ್ಳಿ ಸಿದ್ದೇಶ ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button