ಮಾಜಿ ಮಂತ್ರಿ ಎಸ್.ಆರ್ ಪಾಟೀಲರ ಅಭಿಮತ ದೇಶಕ್ಕೆ ಕಾಂಗ್ರೆಸ್ ಹಿತ – ಬೀಳಗಿ.

ಬೀಳಗಿ ಏಪ್ರಿಲ್.17

ಬೀಳಗಿ ಪಟ್ಟಣದ ಗಾಂಧಿ ಸರ್ಕಲ್ ಹತ್ತಿರ ಲೋಕಸಭಾ ಅಭ್ಯರ್ಥಿ ಹಾಗೂ ಬೀಳಗಿ ಮತ ಕ್ಷೇತ್ರದ ದತ್ತು ಪುತ್ರಿಯಾದ ಸಂಯುಕ್ತ ಪಾಟೀಲರ ಪರ ಮತ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾಜಿ ಸಚಿವರಾದ ಎಸ್ ಆರ್ ಪಾಟೀಲರು ಮಾತನಾಡಿ ವಿಶ್ವದಲ್ಲೆ ಶ್ರೇಷ್ಠವಾದ ಸಂವಿದಾನ, ಪ್ರಜಾಪ್ರಭುತ್ವ ಹೊಂದಿದ ದೇಶದಲ್ಲಿ ಸಂವಿಧಾನ ಸಂರಕ್ಷನೆ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು ತಮ್ಮ ತಮ್ಮ ಹಿತಾಸಕ್ತಿಗಾಗಿ ಸಂವಿಧಾನ ಬದಲಾವಣೆ ಕೆಲಸ ಮಾಡುವ ಇವರು ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ, ದೇಶದ ರಕ್ಷಣೆ ದೃಷ್ಟಿಯಿಂದ ಕಾಂಗ್ರೇಸ್ ಗೆಲ್ಲಬೇಕು ಸಂವಿಧಾನವನ್ನು ಬದಲಾಯಿಸಿದರೆ ದೇಶದ ಪರಿಸ್ಥಿತಿ ಏನಾಗಬಹುದು, ಅತ್ಯಾಚಾರ ಅನಾಚಾರ ಅನೀತಿ ಧೋರಣೆಯ ಅಪಾಯವಿದೆ ದೇಶದ ಉಳುವಿಗಾಗಿ, ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಮತ ಎಂದರು ಶಾಸಕ ಜೆ ಟಿ ಪಾಟೀಲ್ ಮಾತನಾಡಿ ಕ್ಷೆತ್ರದ ದತ್ತು ಪುತ್ರಿಯಾದ ಸಂಯುಕ್ತ ಪಾಟೀಲರನ್ನು ಇಪ್ಪತೈದು ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸೋಣ ಎಂದರೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಆರ್ ಬಿ ತಿಮ್ಮಾಪುರ ರವರು ಮಾತನಾಡಿ ಮಹಿಳಾ ಸಬಲೀಕರಣ ಮಾಡಿ ಟಿಕೆಟ್ ಹಂಚಿಕೆಯಲ್ಲಿ ಆರು ಸಮುದಾಯಗಳಿಗೆ ತಾರತಮ್ಯವೆಸಗಿದೆ ಎಂದರು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ ಆಂತರಿಕ ಸಮೀಕ್ಷೆಯಲ್ಲಿ ಎರಡೂನೂರು ಸ್ಥಾನಗಳನ್ನೂ ಗಳಿಸದ ಬಿ ಜೆ ಪಿ ನಾಲ್ಕು ನೂರು ಸ್ಥಾನ ಗೆಲ್ಲುವ ಕನಸನ್ನು ಹೊತ್ತಿದೆ ರಾಜ್ಯದಲ್ಲಿ ಬಿ ಜೆ ಪಿ ಪಡೆದಿರುವ ಇಪ್ಪತೈದು ಸ್ಥಾನದಲ್ಲಿ ಈ ಸಲ ಕಾಂಗೇಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಅಧ್ಯಕ್ಷ ಎಸ್ ಜಿ ನಂಜಯನಮಠ ಜಿಲ್ಲಾ ಮಹಿಳಾ ಅಧ್ಯಕ್ಷೆ ರಕ್ಷಿತಾ ಈಟಿ ಬಸವಪ್ರಭು ಸರನಾಡಗೌಡರ್ ಮುಂತಾದವರು ಭಾಗವಸಿದ್ದರು.

ರಾಜ್ಯ ವಿಶೇಷ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ವಾಯ್.ಸಿ.ಹಲಗಿ ಶಿರೂರು.

ಸುದ್ದಿ ಸಂಗ್ರಹ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button