ನೀರಿಗಾಗಿ ಹಾಹಾಕಾರ ಮಿರಗಿ ಪಂಚಾಯಿತಿಗೆ ಬೀಗ ಹಾಕಿ – ಗ್ರಾಮಸ್ಥರಿಂದ ಪ್ರತಿಭಟನೆ.

ಮಿರಗಿ ಮಾ.03

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಪಂಚಾಯಿತಿಗೆ ಸಾರ್ವಜನಿಕರು ಇಂದು ಸುಡು ಬಿಸಿಲಿನ ಬೆಗೆಯಲ್ಲಿಯೆ ಪಂಚಾಯತ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಚಾಯತ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳಿಗೆ ಹಲವಾರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಸಮಸ್ಯೆ ಕುರಿತು ಪಂಚಾಯತ ಪಿ.ಡಿ.ಓ ಹಾಗೂ ಸಂಬಂಧಪಟ್ಟ ಸದಸ್ಯರಿಗೆ ಹಲವು ಬಾರಿ ವಿನಂತಿಸಿದರು ಯಾರೂ ಸ್ಪಂದಿಸುತ್ತಿಲ್ಲಾ.

ಇಂತಹ ಬೇಸಿಗೆಯಲ್ಲಿ ಸರ್ಕಾರ ಕುಡಿಯುವ ನೀರಿಗಾಗಿ ಸಮಸ್ಯೆ ಯಾಗದಂತೆ ಪಂಚಾಯತ ಅಧಿಕಾರಿಗಳಿಗೆ ತಿಳಿ ಹೇಳಿದರು.ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇವರು ಸಾರ್ವಜನಿಕ ರೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ. ಆದಷ್ಟು ಬೇಗನೆ ನಮ್ಮ ಸಮಸ್ಯೆ ಸ್ಥಳದಲ್ಲಿಯೆ ಬಗೆ ಹರಿಸಬೇಕು. ಇಲ್ಲವಾದರೆ ನಾವು ಪಂಚಾಯತ ಎದುರಿನ ಪ್ರತಿಭಟನೆ ಹಿಂಪಡೆ ಯುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂತಮ್ಮ ತೆಗ್ಗೆಳ್ಳಿ. ಸುಭಾಸ ಬಿರಾದಾರ. ಮಲ್ಲಮ್ಮ ಭೂಸೆಟ್ಟಿ. ಸಾಹೇಬಗೌಡ ಬಿರಾದಾರ. ಶಿವನಿಂಗವ್ವ ಬಾಗೇವಾಡಿ. ಶಾರದಾ ಹಿರೇಕುರುಬರ. ರಾಜು ತೆಗ್ಗಿಹಳ್ಳಿ. ಇತರರು ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button