ಪ್ರಸ್ತುತ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಲು ಪ್ರತಿಯೊಂದು ಸಮುದಾಯವು ಕೈಜೋಡಿಸಿ — ಕೋಟಿಗಾನಹಳ್ಳಿ ರಾಮಯ್ಯ.

ಕೊಟ್ಟೂರು ಜುಲೈ.8

ಕೊಟ್ಟೂರು ಬಯಲು ಸಾಹಿತ್ಯ ವೇದಿಕೆ ಇವರಿಂದ 20 ನೇ ವರ್ಷದ ನಾವು – ನಮ್ಮಲ್ಲಿ 2023 ರ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ ಕೋಟಿಗಾನಹಳ್ಳಿ ರಾಮಯ್ಯ ಸಂಸ್ಕೃತಿ ಚಿಂತಕರು ಕೋಲಾರ ಇವರು ಉದ್ಘಾಟಿಸಿ, ಸಹಬಾಳ್ವೆಯ ಕಥನಗಳು ಎಂಬ ಶೀರ್ಷಿಕೆ ಅಡಿಯಲ್ಲಿ ಮಾತನಾಡಿದರು, ಇಂದಿನ ಪ್ರಸ್ತುತ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಲು ಪ್ರತಿಯೊಂದು ಸಮುದಾಯವು ಕೈಜೋಡಿಸಬೇಕು,ಜೊತೆಗೆ ಭಾರತ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ತಿಳಿಸಿರುವಂತೆ ಭಾರತೀಯರಾದ ನಾವು ಎಂಬ ಶೀರ್ಷಿಕೆ ಅಡಿಯಲ್ಲಿ ಸಮಾನತೆ, ಸ್ವತಂತ್ರ ನ್ಯಾಯ ಇವುಗಳನ್ನು ಒಳಗೊಂಡಂತೆ ಪ್ರತಿಯೊಬ್ಬ ನಾಗರಿಕನೂ ಅಳವಡಿಸಿಕೊಳ್ಳಬೇಕು. ಹಾಗೆಯೇ 12 ನೇ ಶತಮಾನದ ಬಸವಣ್ಣನ ಚಿಂತನೆಗಳ ಮೇಲೆ ಸಂವಾದವನ್ನು ಮಾಡಲಾಯಿತು, ವೈಚಾರಿಕ ಹಿನ್ನಲೆಯಲ್ಲಿ ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿಕೊಂಡಾಗ ಸಹಬಾಳ್ವೆಯ ಕಥನ ಸಾರ್ಥಕತೆ ಆಗುತ್ತದೆ ಎಂದು ತಮ್ಮ ಉದ್ಘಾಟನಾ ನುಡಿಗಳನ್ನಾಡಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ ಪತ್ರಕರ್ತರು ಬೆಳಗಾವಿ ಇವರು ಇಂದಿನ ಪ್ರಸ್ತುತ ಸಮಾಜದಲ್ಲಿ ಸಹಬಾಳ್ವೆಯ ಕಥನ ಕುರಿತು ತಮ್ಮ ಚಿಂತನೆಗಳನ್ನು ಮಂಡಿಸಿದರು, ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕನೂ ಜೀವಿಸಬೇಕು, ಇಂದಿನ ಸರ್ಕಾರಗಳು ಜಾರಿಗೊಳಿಸುತ್ತಿರುವ ಕಾನೂನುಗಳನ್ನು ವಿಶ್ಲೇಷಿಸುವ ಮೂಲಕ ದೇಶದಲ್ಲಿ ಸಹಬಾಳ್ವೆಯಿಂದ ಜೀವಿಸಬೇಕಾದರೆ ಮಾನವನ ವರ್ತನೆಯಲ್ಲಿ ಬದಲಾವಣೆ ಆಗಬೇಕಿದೆ ಎಂದು ತಮಗೆ ಅನುಭವದ ಅನೇಕ ವಿಷಯವನ್ನು ವಿಶ್ಲೇಷಣಾ ರೂಪದಲ್ಲಿ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲಾ ಶಿವನಗುತ್ತಿ ವಹಿಸಿ ಮಾತನಾಡಿದ ಇವರು ಇಂದಿನ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಲು ಮನಸ್ಸುಗಳ ಬದಲಾವಣೆ ಆಗಬೇಕಿದೆ, ಯಾವುದೇ ಜಾತಿ ಮತ,ಧರ್ಮ, ಪಂಥಗಳ ನಡುವೆ ಬೇಧಭಾವ ಏನಿಸದೆ ನಾವು ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು ಅದಕ್ಕೆ ಉದಾಹರಣೆ ಎಂದರೆ ನಮ್ಮ ಕುಟುಂಬ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಆಡಿದರು.ಪ್ರಾಸ್ತಾವಿಕವಾಗಿ ಶ್ರೀ ಅರುಣ್ ಜೋಳದ ಕೂಡ್ಲಿಗಿ ಇವರು ಮಾತನಾಡುತ್ತಾ ಸಮಾನತೆಯಲ್ಲಿ ಅಸಮಾನತೆಯನ್ನು ಇಂದಿನ ಸಮಾಜದಲ್ಲಿ ನಾವುಗಳು ಕಾಣುತ್ತಿದ್ದೇವೆ, ಇದು ಬದಲಾಗಬೇಕಾಗಿದೆ ಇಂತಹ ಬದಲಾವಣೆಗೆ ನಾನು ನಮ್ಮಲ್ಲಿ ಎಂಬ ಕಾರ್ಯಕ್ರಮ ಕಳೆದ 2 ದಶಕಗಳಿಂದ ಬಯಲು ಸಾಹಿತ್ಯ ವೇದಿಕೆ ಮಾಡಿಕೊಳ್ಳುತ್ತಾ ಬಂದಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.ನಂತರ ಅನೇಕ ವಿಚಾರ ಗೋಷ್ಠಿಗಳು ನಡೆದವುಕಾರ್ಯಕ್ರಮದಲ್ಲಿ ಕೊಟ್ಟೂರಿನ ಹಿರಿಯ ಸಾಹಿತಿ ಕುಂಬಾರ ವೀರಭದ್ರಪ್ಪ ಹಾಗೂ ಅನೇಕ ಗಣ್ಯರು ಉಪಸ್ಥಿತಿ ಇದ್ದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button