ಯುವಕರು ದೇಶದ ಆಸ್ತಿ, ಮೊಬೈಲ್ ನಲ್ಲಿ ಮುಳುಗದಿರಿ- ಡಿ.ಡಿ.ಪಿ.ಐ. ಸೋಮಶೇಖರ್ ಹೊಕ್ರಾಣಿ.
ಮಾನ್ವಿ ನ.24

ನಾವು ಕನಸ್ಸು ಕಟ್ಟಿದ್ದು ಯುವಕರು ನಮ್ಮ ದೇಶ ಕಟ್ಟುವ ಶಿಲ್ಪಿಗಳಾಗುತ್ತಾರೆ, ನಮ್ಮ ಆಸ್ತಿ ಇಲ್ಲಿನ ಖನಿಜ ಸಂಪನ್ಮೂಲ ಇರಬಹುದು ದೊಡ್ಡ ಆಸ್ತಿ ಎಂದರೆ ನಮ್ಮ ಯುವಕರು. ಯುವಕರೇ ಕೆಟ್ಟ ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳದಿರಿ. ಯಾವುದೋ ಕ್ಷಣಿಕ ಸುಖಕ್ಕಾಗಿ ನಿಮ್ಮ ಭವಿಷ್ಯ ಕೊನೆ ಗೊಳ್ಳದಿರಿ. ನಮಗೆ ಹಿಂದುಳಿದ ಜಿಲ್ಲೆಯ ಎಂಬ ಹಣೆಪಟ್ಟಿ ತೆಗೆದು ಹಾಕಲಿಕ್ಕೆ ನಿಮ್ಮ ಶ್ರಮ ಅವಶ್ಯ, ಯುವಕರಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬೇಕು ಎಂದು ಕಾಲೇಜಿಗೆ ಭೇಟಿ ನೀಡಿದ ಶಾಲ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪ ನಿರ್ದೇಕರಾದ ಸೋಮಶೇಖರ್ ಹೊಕ್ರಾಣಿ ಹೇಳಿದರು.ಮಾನ್ವಿ ತಾಲೂಕಿನ ಪಟ್ಟಣದ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾನವಿ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರುಗಿತು. ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ಮಾತನಾಡುತ್ತಾ “ಗುರಿಯತ್ತಾ ನಿಮ್ಮ ಚಿತ್ತವಿರಲಿ, ವಿದ್ಯಾರ್ಥಿ ಜೀವನ ಗೋಲ್ಡ್ ಅಲ್ಲ ಇಲ್ಲಿ ಚನ್ನಾಗಿ ರೂಪಿಸಿ ಕೊಂಡು ಮುಂದೆ ಚಟಗಳು ಗೆಳೆಯರಿಂದ ಆರಂಭವಾಗಿ ಚಟ್ಟಕ್ಕೆ ಕೊನೆ ಗೊಳ್ಳುತ್ತದೆ. ಇಲ್ಲಿ ಚನ್ನಾಗಿ ಬಳಸಿ, ಸ್ವೀಕರಿ, ಅನುಭವ ಪಡೆದರೆ ಮುಂದಿನ ಜೀವನ ಬಂಗಾರವಾಗಲು ಸಾಧ್ಯ ಇಲ್ಲಿ ಬಂಗಾರ ಮಾಡಿಕೊಂಡು ಎಂಜಾಯ್ ಮೊಜು ಮಸ್ತಿ ಮಾಡಿದರೆ ಮುಂದೆ ಮುಪ್ಪಿನ ವಯಸ್ಸಿನಲ್ಲಿ ಶ್ರಮ ಪಡ ಬೇಕಾಗುತ್ತದೆ. ಹಾಗಾಗ ಬಾರದು ಎಂದರೆ ನಾವು ಇವತ್ತು ಶ್ರಮ ವಹಿಸಬೇಕು ಸಾಧಿಸಬೇಕು ಬದುಕು ರೂಪಿಸಿ ಕೊಳ್ಳಬೇಕು. ಗುಟ್ಕಾ, ಮಟ್ಕಾ, ಧೂಮಪಾನ, ಮದ್ಯಪಾನ ತಂಬಾಕಿಗೆ ಬಲಿಯಾಗಬೇಡಿ ಆರೋಗ್ಯ ಬರಿ ಭಾಗ್ಯವಲ್ಲ, ಮಹಾಭಾಗ್ಯ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಪ್ರಚಾರ್ಯರಾದ ಡಾ, ಕುಂಟೆಪ್ಪ ಗೌರಿಪುರ್, ರಾಯಚೂರಿನ ಎಲ್.ವಿ.ಡಿ ಕಾಲೇಜಿನ ಪ್ರಾಚಾರ್ಯರಾದ ಈರೇಶ್, ಸೈನ್ಸ್ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ್, ಉಪನ್ಯಾಸಕ ಅಬ್ದುಲ್, ಸತೀಶ್, ವಲಯ ಮೇಲ್ವೀಚಾರಕಿ ಸುನಂದಾ, ಸೇವಾ ಪ್ರತಿ ನಿಧಿ ಮೆಹೆಬೂಬ್ ಮಾನ್ವಿ, ಈಶ್ವರಿ ಮತ್ತು ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ