ತಳವಾರ ಸಮಾಜದ ವತಿಯಿಂದ ಶಾಸಕರಾದ – ಅಶೋಕ.ಮನಗೂಳಿ ಯವರಿಗೆ ಸನ್ಮಾನ.

ಸಿಂದಗಿ ಮಾ .09

ಇಂದು ಸಿಂದಗಿಯಲ್ಲಿ ತಳವಾರ ಸಮುದಾಯ ಭವನ ನಿರ್ಮಾಣ ಮಾಡಲು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ 20 ಗುಂಟೆ ಜಮೀನನ್ನು ಮಂಜೂರು ಮಾಡಿಸಿರುವ ಸಿಂದಗಿ ಮತ ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರಿಗೆ ಇಂದು ತಳವಾರ ಸಮಾಜದ ವತಿಯಿಂದ ವಿಶೇಷವಾಗಿ ಸನ್ಮಾನಿಸಿದರು. ನಂತರ ಮಾತನಾಡಿದ ಶಾಸಕರಾದ ಅಶೋಕ.ಮನಗೂಳಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ತಳವಾರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ತಳವಾರ ಮಹಾಸಭಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ಡಾ, ರಾಜಶೇಖರ ನರಗೋದಿ ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ ಅರವಿಂದ ನಾಯ್ಕೋಡಿ ನಾಗು ಗ್ಯಾಸ್ ಸಿದ್ಧರಾಮ ತಳವಾರ ಸಂಜೀವ ಡಾಂಗೆ ಪರಶುರಾಮ ನಾಯ್ಕೋಡಿ ಸುರೇಶ ನಾಯ್ಕೋಡಿ ಪ್ರಭು ನಾಟೀಕಾರ ಪರು ಯಂಕಂಚಿ ಚಿದಾನಂದ ನಾಯ್ಕೋಡಿ ಶರಣಪ್ಪ ಬಂಕಲಗಿ ಸಂತೋಷ ಮರಡಿ ಬಸವರಾಜ. ಕಲ್ಲೂರ, ಭೋಗರಾಜ ತಳವಾರ ಸಂಜು ತಳವಾರ ಸೇರಿದಂತೆ ತಳವಾರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button