🚨SUPER BREAKING NEWS🚨 ಸರಣಿ ಸಾವುಗಳ ಬೆನ್ನಲ್ಲೇ ಆಳದ ರಹಸ್ಯಗಳ ಭೇದಿಸಲು ಸಾರ್ವಜನಿಕರ ರಣ ಕಹಳೆ – ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ನಡೆಯುತ್ತಿದೆಯೇ ಕರಾಳ ದಂಧೆ..?

ಬ್ರಹ್ಮಾವರ/ಉಡುಪಿ ಏ.15

ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಪಕ್ಕದಲ್ಲೇ ಹೆಡೆ ಎತ್ತಿ ನಿಂತಿರುವ **‘ಹೋಟೆಲ್ ಆಶ್ರಯ’** ಇದೀಗ ಸಾವಿನ ಸಂಚಿನ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆಯೇ? ಎಂಬ ಗಂಭೀರ ಪ್ರಶ್ನೆ ಇಡೀ ರಾಜ್ಯವನ್ನು ಕಾಡ ತೊಡಗಿದೆ. ಕಳೆದ ಹಲವು ದಶಕಗಳಿಂದ ಇಲ್ಲಿ ಸಂಭವಿಸುತ್ತಿರುವ ಅನುಮಾನಾಸ್ಪದ ಸಾವುಗಳು ಮತ್ತು ಇತ್ತೀಚಿಗೆ ನಡೆದ ಉದ್ಯಮಿಯ ಆತ್ಮ ಹತ್ಯೆ ಪ್ರಕರಣವು ಈ ಹೋಟೆಲ್‌ನ ಅಡಿಪಾಯವನ್ನೇ ನಡುಗಿಸುತ್ತಿದೆ.

🛑 ಮಣ್ಣಿನಡಿಯಲ್ಲಿ ಹೂತ ರಹಸ್ಯಗಳು ಹೊರ ಬರಲಿ..!

ಇಲ್ಲಿ ನಡೆದಿರುವ ಪ್ರತಿ ಘಟನೆಯೂ ಕೇವಲ ಕಾಕತಾಳೀಯ ಎನ್ನುವುದನ್ನು ಸಾರ್ವಜನಿಕರು ನಂಬಲು ಸಿದ್ಧರಿಲ್ಲ. ಇಲ್ಲಿನ ಗೋಡೆಗಳ ಹಿಂದೆ ಅಡಗಿರುವ ಸತ್ಯಗಳು ಹೊರಬರಬೇಕಾದರೆ ಉನ್ನತ ಮಟ್ಟದ ತನಿಖೆ ಅನಿವಾರ್ಯ. “ಹೋಟೆಲ್‌ನ ಹಳೆಯ ಕಡತಗಳನ್ನು ಕೆದಕಿದರೆ, ಇಲ್ಲಿ ಬಲಿಯಾದ ಜೀವಗಳ ಹಿಂದಿನ ಅಸಲಿ ಸತ್ಯ ಹೊರಬರಲಿದೆ” ಎಂದು ಸ್ಥಳೀಯರು ಗುಡುಗಿದ್ದಾರೆ. ಸಾರ್ವಜನಿಕರ ಈ ಆಗ್ರಹಕ್ಕೆ ಈಗ ರಾಜ್ಯಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ.

⚠️ ಬಾರ್ ಹಾವಳಿ ಮತ್ತು ರೌಡಿ ಅಸಭ್ಯ ವರ್ತನೆ..!

ಈ ಹೋಟೆಲ್ ಆವರಣದಲ್ಲಿರುವ ಬಾರ್ ಕಿಡಿಗೇಡಿಗಳ ಅಡ್ಡಾವಾಗಿ ಮಾರ್ಪಟ್ಟಿದೆ. ಕುಡಿದ ಅಮಲಿನಲ್ಲಿ ಹುಡುಗರು ನಡೆಸುವ ಹಾವಳಿ, ಪಾದಚಾರಿಗಳ ಮೇಲೆ ಎಸಗುವ ಅಸಭ್ಯ ವರ್ತನೆಗಳು ಬ್ರಹ್ಮಾವರದ ಶಾಂತಿಯನ್ನು ಕದಡುತ್ತಿವೆ. ಸರ್ವಿಸ್ ರಸ್ತೆಗೆ ತೀರಾ ಹತ್ತಿರವಾಗಿರುವುದರಿಂದ, ವಾಹನ ಚಾಲಕರಿಗೆ ಈ ಹೋಟೆಲ್ ಒಂದು ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಅವೈಜ್ಞಾನಿಕ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಚಾಲಕರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ.

🔍 ಕವಿತೆಯ ರೂಪದಲ್ಲಿ ಸಾರ್ವಜನಿಕರ ಆಕ್ರೋಶ:-

ಹೋಟೆಲ್‌ನ ಈ ದುಸ್ಥಿತಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಸಾಲುಗಳು ಹೀಗಿವೆ.

“ಆಶ್ರಯದ ಹೆಸರಿನಲ್ಲಿ ಅವಿತಿದೆ ಸಾವಿನ ದೆವ್ವ,

ಸರತಿಯಲ್ಲಿ ಬೀಳುತ್ತಿವೆ ಸಾಲು ಸಾಲು ಜೀವ..!

ಬಾರ್ ಅಮಲಲಿ ತೂರಾಡುವ ಕಿಡಿಗೇಡಿಗಳ ಅಟ್ಟಹಾಸ,

ಬ್ರಹ್ಮಾವರದ ಮಣ್ಣಿಗೆ ಹತ್ತಿದೆಯೇ ಈ ಹೋಟೆಲ್‌ನ ಶಾಪ?”

📢 ತನಿಖೆಗೆ ಒಳಪಡಲಿ ಪ್ರತಿ ಇಂಚು ಜಾಗ..!

ಈ ಹೋಟೆಲ್ ಅನ್ನು ಕೂಡಲೇ ಸಮಗ್ರ ತನಿಖೆಗೆ ಒಳಪಡಿಸಬೇಕು. ಇಲ್ಲಿನ ಗ್ರಾಹಕರ ನೋಂದಣಿ ಪುಸ್ತಕದಿಂದ ಹಿಡಿದು ಸಿಸಿಟಿವಿ ದೃಶ್ಯಾವಳಿಗಳವರೆಗೆ ಪ್ರತಿಯೊಂದನ್ನೂ ಜಾಲಾಡಬೇಕಿದೆ. ತನಿಖೆ ನಡೆಸದಿದ್ದರೆ ಅಡಗಿರುವ ಸತ್ಯಗಳು ಸಮಾಧಿಯಾಗಲಿವೆ. ಕೂಡಲೇ ಈ ಹೋಟೆಲ್‌ನ ಪರವಾನಗಿ ರದ್ದುಗೊಳಿಸಿ, ಇಂತಹ ಅನಾಹುತಗಳಿಗೆ ಬ್ರೇಕ್ ಹಾಕಬೇಕು ಎನ್ನುವುದು ಜನಾಕ್ರೋಶದ ತುತ್ತ ತುದಿಯಾಗಿದೆ.

ಇದು ಕೇವಲ ಸುದ್ದಿಯಲ್ಲ, ಸಾವಿನ ಅಡ್ಡೆಯ ವಿರುದ್ಧದ ಸಮರ..!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button