ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಶಾಂತಿ ಮತ್ತು ಸೌಹಾರ್ದತೆ ಯಿಂದ ಹಬ್ಬ ಆಚರಿಸಲು – ಪಿ.ಎಸ್.ಐ ಅರವಿಂದ್ರ ಅಂಗಡಿ ಕರೆ.

ಆಲಮೇಲ ಜೂ.16

ಪಟ್ಟಣದ ಪೋಲಿಸ್ ಠಾಣೆ ಅವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯನ್ನು ಆಲಮೇಲ ಠಾಣೆಯ ಪಿ.ಎಸ್.ಐ ಅರವಿಂದ್ರ ಅಂಗಡಿ ಇವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ಜರಗಿತು.ಪಿ.ಎಸ್.ಐ ಅರವಿಂದ್ರ ಅಂಗಡಿ ಮಾತನಾಡಿ.

ಮುಂಬರುವ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆ ಆಚರಣೆ ಮಾಡಬೇಕು ಯಾವುದೇ ಆಂತರಿಕ ಘಟನೆ ನಡೆಯದಂತೆ ಕಾನೂನು ಪರಿಪಾಲನೆ ಯಿಂದ ಯಾವುದೇ ಹಿಂದೂ ಮುಸ್ಲಿಂ ಹಬ್ಬವನ್ನಾಗಲಿ ಶಾಂತಿಯುತವಾಗಿ ಎಲ್ಲರೂ ಸೋದರಂತೆ ಭಾವನೆಗಳನ್ನು ಇಟ್ಟುಕೊಂಡು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು.

ನಂತರ ಹರೀಶ್ ಎಂಟಮಾನ ಮಾತನಾಡಿ ಮೊಹರಂ ಹಬ್ಬವನ್ನಾಗಲಿ ಹಿಂದೂ ಹಬ್ಬವನ್ನಾಗಲಿ ಸೋದರಂತೆ ಯಾವದೇ ಭೇದ ಭಾವವಿಲ್ಲದೆ ಮಾಡೋಣ ಎಂದು ಹೇಳಿದರು.

ಹಾಗೂ ಮೊಹರಂ ಹಬ್ಬದ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡರಾದ ರಮೇಶ್ ಬಂಟನೂರ ಮಾತನಾಡಿ ಆಲಮೇಲ ಎನ್ನುವುತ್ತದು ಅದು ಭಾವೈಕ್ಯತೆಯ ಸಂಗಮ ಸಾಮರಸ್ಯದ ಸಂಕೇತ ಇಲ್ಲಿ ಅನೇಕ ಧರ್ಮದವರು ಕೂಡಿ ಕೊಂಡು ಗಣೇಶ ಹಬ್ಬವನ್ನಾಗಲಿ ಕಾರ ಹುಣ್ಣಿಮೆ ಹಬ್ಬಗಳನ್ನು ಆಚರಿಸುತ್ತ ಬಂದಿದ್ದೇವೆ ಎಂದು ಹೇಳಿದರು.

ಆಲಮೇಲ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಅಂದಾಜು 36 ಸ್ಥಳಗಳಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆ ಯಿಂದ ಮೊಹರಂ ಹಬ್ಬ ಆಚರಣೆ ನಡೆಯುತ್ತದೆ ಎಂದು ಇಲ್ಲಿನ ಗ್ರಾಮಸ್ಥರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಎ.ಎಸ್.ಐ ಎ.ಎಚ್ ಗಿರಿಣಿ ವಡ್ಡರ. ಪೊಲೀಸ್ ಸಿಬ್ಬಂದಿಗಳಾದ ಚಿದಾನಂದ ಸುರುಗಿಹಳ್ಳಿ. ರಾಮನಗೌಡ ಬಿರಾದಾರ. ಗೋಡೆಕರ್ ವಾಗ್ಮೀರಿ ಕ್ಷತ್ರಿ ಸಿದ್ದರಾಯ ಪಾಟೀಲ. ನದಾಫ್ ಹಾಗೂ ವಿವಿಧ ಗ್ರಾಮದ ಮುಖಂಡರು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button