ವಿವಿಧ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯದ ಕರಾಟೆ ಶಿಕ್ಷಕರಿಗೆ ಪ್ರಶಸ್ತಿ – ಪ್ರಧಾನ ಸಮಾರಂಭ ಜರುಗಿತು.
ವಿಜಯಪುರ ಸೆ.02


ದಿನಾಂಕ 30-08-2026 ರಂದು 3 ನೇ. ರಾಷ್ಟ್ರೀಯ ಮುಕ್ತ ಕರಾಟೆ ಕ್ರೀಡಾಕೂಟವು ಶ್ರೀ ಸ್ವಾಮಿ ಸಮರ್ಥ ಸೌoಸ್ಕೃತಿಕ ಭವನ ಸೊಲ್ಲಾಪುರದಲ್ಲಿ ಜರುಗಿತು. ವಿವಿಧ ಜಿಲ್ಲೆಯ ಹಾಗೂ ರಾಜ್ಯದ ಕರಾಟೆ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ಶ್ರೀಯುತರಾದ ಶ್ರೀ ಬಸವರಾಜ ನಂ ಬಾಗೇವಾಡಿ, ರವರು ವಿವಿಧ ಕ್ರೀಡೆಗಳ ತರಬೇತುದಾರರು ಮತ್ತು ನಿರ್ಣಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದದನ್ನು ಗುರುತಿಸಿ ಈ ವರ್ಷ ಕೊಡ ಮಾಡುವ ರಾಷ್ಟ್ರೀಯ ಉತ್ತಮ ತರಬೇತಿದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಕರಾದ ಶ್ರೀ ಈಶ್ವರ ಎಸ್, ರವರು ಹಾಗೂ ವಿವಿಧ ಜಿಲ್ಲೆಯ ರಾಜ್ಯದ ತರಬೇತುದಾರರು ಮತ್ತು ನಿರ್ಣಾಯಕರು ಭಾಗವಹಿಸಿದ್ದರು.

