ಬೇಸಿಗೆಯಲ್ಲಿ ನಿರ್ಜಲೀಕರಣ ತಡೆಗೆ ಓ.ಆರ್.ಎಸ್ ಸಂಜೀವಿನಿ – ನೀರಿನ ಕೊರತೆ ನಿವಾರಿಸುತ್ತದೆ.

ಗುಂಡನಪಲ್ಲೆ ಮಾ.06

ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಉಪ ಆರೋಗ್ಯ ಕೇಂದ್ರ ವ್ಯಾಪ್ತಿಯ ಗುಂಡನಪಲ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ವಾಂತಿ ಬೇಧಿ ತಡೆಗೆ ಓಂ.ಆರ್.ಎಸ್ ದ್ರಾವಣ ಸ್ವಯಂ ತಯಾರಿಕೆಯ ಜಾಗೃತಿ” ಪ್ರಾತ್ಯಕ್ಷಿಯ ಮೂಲಕ ಶಾಲಾ ಮಕ್ಕಳಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿ ಸಲಾಗಿತ್ತು. ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಬೇಸಿಗೆ ವಾತಾವರಣ ಬದಲಾವಣೆಯಿಂದ ನೀರು ಆಹಾರದ ಕಲಬೆರಕೆ ಯಿಂದ ವಾಂತಿ ಬೇಧಿ ಕಾಯಿಲೆ ಬರಬಹುದು. ಭಯ ಬೇಡ ಮುಂಜಾಗ್ರತೆ ಇರಲಿ ಆರೋಗ್ಯ ಇಲಾಖೆಯಿಂದ ವಿತರಿಸುವ ಓಂ.ಆರ್.ಎಸ್ ದ್ರಾವಣ ವಾಂತಿ ಬೇಧಿ ನಿಯಂತ್ರಣ ಮಾಡಲು ಬೇಸಿಗೆಯಲ್ಲಿ ನಿರ್ಜಲೀಕರಣ ತಡೆಗೆ ಓ.ಆರ್.ಎಸ್ ಸಂಜೀವಿನಿ ನೀರಿನ ಕೊರತೆ ನಿವಾರಿಸುತ್ತದೆ. ಸದುಪಯೋಗ ಪಡೆದು ಕೊಳ್ಳಬೇಕು ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವಾಂತಿ ಬೇಧಿ ಪ್ರಕರಣಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ವಾಂತಿ ಬೇಧಿ ಯಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಆಯಾಸ ನಿಶ್ಯಕ್ತಿ ಉಂಟಾಗುತ್ತದೆ. ರಾಷ್ಟ್ರೀಯ ವಾಂತಿ ಬೇಧಿ ನಿಯಂತ್ರಣ ತಡೆಗೆ, ಶುದ್ಧ ನೀರು ಸೇವನೆ ವೈಯಕ್ತಿಕ ಸ್ವಚ್ಛತೆ ಸುತ್ತ ಮುತ್ತ ಪರಿಸರ ಸ್ವಚ್ಛತೆ, ಕಾಪಾಡಿ ಕೊಳ್ಳಬೇಕು ಸ್ವಯಂ ಓಂ.ಆರ್.ಎಸ್ ತಯಾರಿಕೆಯ ಪ್ರಾತ್ಯಕ್ಷಿಕೆಯಾಗಿ ತಯಾರಿಸುವ ವಿಧಾನ ಮಾಹಿತಿ ನೀಡಿದರು.

ಮನೆಯಲ್ಲಿಯೇ “ಮೌಖಿಕ ನಿರ್ಜಲೀಕರಣ ದ್ರಾವಣ” ತಯಾರಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಪಾತ್ರೆಯಲ್ಲಿ ಒಂದು ಲೀಟರ್ ಶುದ್ಧ ನೀರು ಅಥವಾ ಕುದಿಸಿ ಸೋಸಿ ಆರಿಸಿದ ನೀರಿಗೆ 2.5 ಗ್ರಾಮ ಉಪ್ಪು 4 ಚಮಚ ಸಕ್ಕರೆ ಲಿಂಬು ಮಿಶ್ರಣ ಮಾಡಿ ತಯಾರಿಸಿ ತಾಸಿಗೊಮ್ಮೆ 50 ರಿಂದ 100 ಮೀ.ಲಿ ಸೇವಿಸಬೇಕು. ಎಂದು ವಿವಿರವಾದ ಮಾಹಿತಿ ನೀಡಿದರು. ವಾಂತಿ ಬೇಧಿ ತಡೆಗೆ, ದ್ರಾವಣ ನಿರ್ಜಲೀಕರಣ ತಪ್ಪಿಸಲು ಓ.ಆರ್.ಎಸ್ ಸಂಜೀವಿನಿ ತರಹ ಉಪಯೋಗ ವಾಗುತ್ತದೆ. ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯ ಶಿಕ್ಷಕ ಸಂಗಪ್ಪ ಹುನಗುಂದ, ಗುರು ಮಾತೆಯರಾದ ಭಾರತಿ ಗಣಿಯಾರ, ಸುನಿತಾ ಮಾಸ್ತಿ, ಅನಿತಾ ಗದಿಗೆನ್ನವರ, ಸಹ ಶಿಕ್ಷಕರಾದ, ಆರ್.ಬಿ ಅಂಟರತಾನಿ, ರಾಜೇಶ್ ಹುಲಗನ್ನವರ, ಪರಶುರಾಮ ರಗರಟ್ಟಿ, ನಾರಾಯಣ ಗೌಡ ಪಾಟೀಲ್ ಆರೋಗ್ಯ ಇಲಾಖೆ ವಿವಿಧ ಹಂತದ ಅಧಿಕಾರಿಗಳು, ಆಶಾ, ಬಿಸಿಯೂಟ ಕಾರ್ಯಕ್ರಮ ಸಿಬ್ಬಂದಿ,ಶಾಲಾ ಮಕ್ಕಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button