ಬಿಡುಗಡೆಗೊಂಡ ಸಾಕ್ಷರತಾ ಪ್ರೇರಕರಿಗೆ ನ್ಯಾಯ ಯಾವಾಗ.?
ಇಂಡಿ ಸಪ್ಟೆಂಬರ್.27
ಕೇಂದ್ರ ಸರ್ಕಾರದ ಯೋಜನೆಯಡಿ ಕನಾ೯ಟಕ ರಾಜ್ಯದಲ್ಲಿ ಹಲವಾರು ವಷ೯ಗಳಿಂದ ಜಾರಿಯಲ್ಲಿದ್ದ ವಯಸ್ಕರ ಸಾಕ್ಷರತಾ ಶಿಕ್ಷಣ ಪದ್ದತಿಯಲ್ಲಿ “ಸಾಕ್ಷರತಾ”ಸಂಯೋಜಕರಾಗಿ,ಪ್ರೇರಕರಾಗಿ ಕಾಯ೯ನಿವ೯ಹಿಸಿದ ರಾಜ್ಯದ ಅನೇಕ ಸಿಬ್ಬಂದಿಗಳ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ.ಕಾರಣ ಸಾಕ್ಷರತಾ ಯೋಜನೆ ಜಾರಿಯಾಗಿನಿಂದಲೂ ಅನೇಕ ಸಿಬ್ಬಂದಿಗಳು ಎಸ್.ಎಸ್.ಎಲ್ಸಿ, ಪಿ.ಯು.ಸಿ ,ಬಿ.ಎ. ಬಿ.ಡ್. ಎಮ್.ಎ.ಹೀಗೆ ಅನೇಕ ಸಿಬ್ಬಂದಿಗಳು ವಿದ್ಯಾಹ೯ತೆ ಹೊಂದಿ ಗೌರವಧನ ತಿಂಗಳಿಗೆ 2000 ದಿನಗೂಲಿಯಲ್ಲಿ ಹಗಲು-ರಾತ್ರಿಯನ್ನದೆ 20ರಿಂದ 30ವಷ೯ಗಳ ಕಾಲ ಕಾಯ೯ನಿವ೯ಹಿದರು.ಆದರೆ ರಾಜ್ಯ ಸರ್ಕಾರ ಏಕಾಏಕಿ 2017ರಲ್ಲಿ ಈ ಯೋಜನೆ ಕೆಲವು ಕಡೆ ನಿಲ್ಲಿಸಿತು.ಇದರಿಂದ ರಾಜ್ಯದಲ್ಲಿ ಕಾಯ೯ನಿವ೯ಹಿಸುತಿದ್ದ ಅಂದಾಜು 30ರಿಂದ 40 ಸಾವಿರ ಸಿಬ್ಬಂದಿಗಳು ಕೆಲಸವಿಲ್ಲದೆ ,ಇತರೆ ನೌಕರಿ ಪಡೆಯಲಿಕ್ಕೆ ವಯಸ್ಸಿನ ಮಿತಿ ಮೀರಿ ಅನಾಥವಾಗಿ ತಮ್ಮ-ತಮ್ಮ ಕುಟುಂಬ ಸಹಿತ ನಿವ೯ಹಿಸದೆ, ಅಲೆದಾಡಿ ಬೀದಿಗೆ ಬಂದಿದೆ ಅನೇಕ ಘಟನೆಗಳು ಕಣ್ಮುಂದೆ ಬಂದಿವೆ.ಆದರೆ ಕತ೯ವ್ಯದಿಂದ ಬಿಡುಗಡೆಗೊಂಡಾಗ ಸಿಬ್ಬಂದಿಗಳು ಸರಕಾರಕ್ಕೆ ಅನೇಕ ಬಾರಿ ಅನೇಕ ಮನವಿಗಳನ್ನು ಸಲ್ಲಿಸಲಾಗಿತ್ತು.

ಆದರೆ ಸರ್ಕಾರವೂ ಕೂಡ ಈ ಸಾಕ್ಷರತಾ ಪ್ರೇರಕರನ್ನು ಆಯಾ ಜಿಲ್ಲೆಗಳಲ್ಲಿ ಖಾಲಿ ಇದ್ದ ಕೆಲವು ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುವಂತೆ ರಾಜ್ಯದ ರಾಜ್ಯ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ಸೂಚಿಸಿ,ಈಗಾಗಲೇ ಒಂದು ವಷ೯ ಕಳೆದಿದೆ.ಅದೇ ರೀತಿ ಅನೇಕ ಜಿಲ್ಲೆಗಳಲ್ಲಿ ಸಂಯೋಜಕರ,ಪ್ರೇರಕರು ಕಾಯ೯ನಿವ೯ಸಿದ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಯವರು ತೆಗೆದು ಕೊಂಡಂತಾಗಿದೆ.ಆದರೆ ಇನ್ನೂ ವರೆಗೆ ಯಾವ ಸಂಯೋಜಕರಿಗೂ,ಪ್ರೇರಕರಿಗೂ ಕೆಲಸ ನಿವ೯ಹಿಸಲು ಆದೇಶ ಪತ್ರಗಳನ್ನು ನೀಡಿರುವುದಿಲ್ಲ.ಕಾರಣ ಸಂಬಂಧಿಸಿದ ಇಲಾಖೆಯವರು ಆದಷ್ಟು ಬೇಗನೆ ಸಾಕ್ಷರತಾ ಸಿಬ್ಬಂದಿಗಳಿಗೆ ಕಾಯ೯ನಿವ೯ಹಿಸುವ ಅನುಮತಿ ಪತ್ರ ನೀಡಿದರೆ.ಅವರ ಕುಟುಂಬಕ್ಕೊಂದು ಹೊಸ ಜೀವ ತುಂಬಿದಂತಾಗುತ್ತದೆ.ಸರಕಾರ ಈ ಕೆಲಸವನ್ನು ಆದಷ್ಟು ಬೇಗನೆ ಮಾಡಬೇಕೇಂದು “ಸಾಮಾಜೀಕ ಹೋರಾಟಗಾರ ಹಾಗೂ ಪತ್ರಕತ೯ರಾದ ಶಿವಾನಂದ ಹರಿಜನ ಇವರು ಸರಕಾರಕ್ಕೆ ವಿನಂತಿಸಿದ್ದಾರೆ.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ