ಅಲೆಮಾರಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ “ಗ್ರಂಥಪಾಲಕರ ದಿನಾಚರಣೆಯ” ಪ್ರಯುಕ್ತ ಗ್ರಂಥಾಲಯದ ಪಿತಾಮಹರಾದ ಪದ್ಮಶ್ರೀ – ಡಾ, ಎಸ್.ಆರ್ ರಂಗನಾಥನ್.
ಹೊಸಪೇಟೆ ಆ.12

ಇಂದು ದಿನಾಂಕ : 12.08.2024ರ ಬೆಳಿಗ್ಗೆ 11.30 ಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಬುಡ್ಗ ಜಂಗಮ್ ಕಾಲೋನಿಯ ಅಲೆಮಾರಿ ಕಾರ್ಯಾಲಯದಲ್ಲಿ “ಗ್ರಂಥಪಾಲಕರ ದಿನಾಚರಣೆಯ” ಪ್ರಯುಕ್ತ ಗಂಥಾಲಯ ಪಿತಾಮಹರಾದ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ರವರ ಭಾವ ಚಿತ್ರಕ್ಕೆ ಮಾಲರ್ಪಾಣೆ ಮಾಡಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಲೆಮಾರಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರ ಸಣ್ಣಮಾರೆಪ್ಪ ಮಾತನಾಡಿ 2008 ರಲ್ಲಿಯೇ ಗ್ರಂಥಾಲಯಗಳು ಆರಂಭವಾಗಿದ್ದವು, ಅಂದರೆ ಜಿಲ್ಲೆಗೆ 1 ಅಥವಾ 2 ಮಾತ್ರ ಗ್ರಂಥಾಲಯಗಳನ್ನು ನೀಡಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಹೊಸ ಗ್ರಂಥಾಲಯಗಳನ್ನು ಸರ್ಕಾರ ಮಂಜೂರು ಮಾಡಿರುವುದಿಲ್ಲ. ಹಾಗಾಗಿ ಪ್ರತಿ ಅಲೆಮಾರಿ ಕಾಲೋನಿಗಳಲ್ಲಿ ಹೊಸ ಗ್ರಂಥಾಲಯಗಳನ್ನು ಅದಷ್ಟು ಬೇಗನೆ ರೂಪಿಸಿ ಅಲೆಮಾರಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಡಲಾಯಿತು. ಇದರಲ್ಲಿ ಅಲೆಮಾರಿ ಮಕ್ಕಳು ನಮ್ಮ ರಾಜ್ಯದಲ್ಲಿ ಜಿಲ್ಲಾವಾರು, ತಾಲೂಕುವಾರು, ನಗರ, ಗ್ರಾಮದ ಅಲೆಮಾರಿಗಳ ಕಾಲೋನಿಗಳಲ್ಲಿ ಅಲೆಮಾರಿ ಗ್ರಂಥಾಲಯಗಳನ್ನು ಸರ್ಕಾರ ಮಂಜೂರು ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು. ಅಲೆಮಾರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ದಾರಿ ದೊರಕಿ ದಂತಾಗುತ್ತದೆ. ಇದರಿಂದ ಅಲೆಮಾರಿ ಮಕ್ಕಳು ಭಿಕ್ಷೆ ಬೇಡುವುದನ್ನು ನಿಲ್ಲಿಸಲು ಸಹ ದಾರಿ ಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರಪ್ಪ ಬಾದಿಗಿ, ಚೆನ್ನದಾಸರ ಮುಖಂಡರಾದ ಶೇಖರ್.ಡಿ, ಇದೇ ಕಾಲೋನಿಯ ಮುಖಂಡರುಗಳಾದ ಡಿ.ಜಂಬಣ್ಣ, ದೊಡ್ಡ ಮಾರೆಪ್ಪ, ವೆಂಕಟೇಶ್, ಮಾರೆಪ್ಪ ಮತ್ತು ಇತರರು ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ.