“ಕ್ಷಯ ಮುಕ್ತ ಗ್ರಾಮ ಪಂಚಾಯತ” ಶಾಲಾ ಮಕ್ಕಳಿಂದ ಮಾನವ ಸರಪಳಿ ಅಭಿಯಾನ ಜಾಗೃತಿ.
ಬೆನಕಟ್ಟಿ ಡಿ.17

ಬಾಗಲಕೋಟೆ ತಾಲೂಕಿನ ಬೆನಕಟ್ಟಿಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮದ ಆಡಿಯಲ್ಲಿ “ಕ್ಷಯ ಮುಕ್ತ ಗ್ರಾಮ ಪಂಚಾಯತ” ಶಾಲಾ ಮಕ್ಕಳಿಂದ ಮಾನವ ಸರಪಳಿ ಅಭಿಯಾನ ಆಯೋಜಿಸಲಾಗಿತ್ತು. ಗ್ರಾಮ ಆರೋಗ್ಯ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಪತ್ತಾರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಜ್ಯೋತಿ ಪಾಟೀಲ್, ಬಾಗಲಕೋಟ ತಾಲೂಕಾ ಸಾಹಿತ್ಯ ಪರೀಷತ ಅಧ್ಯಕ್ಷರಾದ, ಪಿ.ಆರ್ ಸಣ್ಣಪ್ಪನ್ನವರ್, ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿ, ಜಿಲ್ಲಾ ತಾಂತ್ರಿಕ ಸಂಯೋಜಕ ಸಂಗಮೇಶ ಅಲದಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ, ಜಿ.ಆರ್ ತಳವಾರ ಗುರು ಮಾತೆ ಅಂಜಲಿ ಎಲ್,ಎಸ್.ಆರ್ ಅಬ್ಬಿಗೇರಿ, ಆಶಾರಾಣಿ ವೇದಿಕೆ ಮೇಲಿದ್ದರು, ಎರಡು ವಾರಕ್ಕಿಂತ ಅಧಿಕ ಕೆಮ್ಮು, ಕಫದಲ್ಲಿ ರಕ್ತ ಕಾಣಿಸುವುದು, ತೂಕ ಕಡಿಮೆ ಯಾಗುವುದು.

ರಾತ್ರಿ ಚಳಿ ಜ್ವರ ಕ್ಷಯ ರೋಗದ ಲಕ್ಷಣಗಳು, ಕ್ಷಯರೋಗ ಭಯಬೇಡ ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪಕ್ಕಾ ಪರೀಕ್ಷೆ ಪಕ್ಕಾ ಚಿಕಿತ್ಸೆ ಲಭ್ಯವಿದ್ದು. ಮಧು ಮೇಹ, ಧೂಮ್ರಪಾನ ಸೇವಿಸುವರು, ತಂಬಾಕು ಸೇವನೆ ಮಾಡುವರು, ಚಿಕಿತ್ಸಯಲ್ಲಿರುವ ಸಂಪರ್ಕಿಗಳು ಕ್ಷಯದ ಅಪಾಯ ದಲ್ಲಿರುವರು,ತಪ್ಪದೇ ಕಫ್ ದ ಮಾದರಿ ಪರೀಕ್ಷಿಸಿ ಕೊಳ್ಳಬೇಕು ವಿದ್ಯಾರ್ಥಿಗಳು ಸಾರ್ವಜನಿಕರು ಕ್ಷಯ ಮುಕ್ತ ಗ್ರಾಮಕ್ಕಾಗಿ ಕೈಜೋಡಿಸಲು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ಆರೋಗ್ಯ ಶಿಕ್ಷಣ ನೀಡಿದರು. ಪಂಚಾಯತ ಅಭಿವೃಧ್ಧಿ ಅಧಿಕಾರಿ, ಜ್ಯೋತಿ ಪಾಟೀಲ್ ಗ್ರಾಮ ಆರೋಗ್ಯ ಕಾರ್ಯಕ್ರಮ ಯೋಜನೆಯಲ್ಲಿ ಕ್ಷಯ ರೋಗದ ಪ್ರಕರಣಗಳಿಗೆ, ಪೋಷಕಾಂಶ ಯುಕ್ತ ಆಹಾರ ಸೇವನೆಗೆ ಪೌಷ್ಟಿಕ ಆಹಾರ ಪೋಟ್ಟಣ ವಿತರಿಸಿದರು. ತಾಲೂಕಾ ಸಾಹಿತ್ಯ ಪರೀಷತ್ ಅಧ್ಯಕ್ಷರಾದ ಪಿ.ಆರ್ ಸಣ್ಣಪ್ಪನ್ನವರ್ ವಿಶೇಷ ಹಾಡಿನ ಮೂಲಕ ಮಕ್ಕಳ ಗಮನ ಸೇಳೆದು ಅಚ್ಚು ಕಟ್ಟಿನಿಂದ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ ಆರೋಗ್ಯ ಕಾರ್ಯಕ್ರಮ ಅದಡಿಯಲ್ಲಿ, “ಕ್ಷಯ ಮುಕ್ತ ಗ್ರಾಮ ಪಂಚಾಯತ” ಶಾಲಾ ಮಕ್ಕಳು ಮಾನವ ಸರಪಳಿ ನಿರ್ಮಿಸಿ ಕ್ಷಯ ಮುಕ್ತ ಗ್ರಾಮಕ್ಕಾಗಿ ಕೈ ಜೋಡಿಸಿ “ಪಕ್ಕಾ ಪರೀಕ್ಷೆ ಪಕ್ಕಾ ಚಿಕಿತ್ಸೆ” ಘೋಷಣೆ ಕೂಗುತ್ತಾ ಕ್ಷಯ ಮುಕ್ತ ಗ್ರಾಮ ಪಂಚಾಯತ ಮಾನವ ಸರಪಳಿ ಕಾರ್ಯಕ್ರಮ ನಿರ್ಮಿಸಿ. ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಶಾಲಾ ಗುರು ವೃಂದವರು, ಆಶಾ ಕಾರ್ಯಕರ್ತೆಯರಾದ ಅವ್ವಕ್ಕ ಗೋರವರ, ಸುನಂದಾ ನಿಂಗಾಪೂರ, ತಾಯವ್ವ ಮಾದರ, ಗ್ರಾಮ ಪಂಚಾಯತ ಸಿಬ್ಬಂದಿ ಹಣಮಂತ ಸೂಳಿಕೇರಿ, ದುರ್ಗಪ್ಪ ಮಾದರ ಶಾಲಾ ಮುದ್ದು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.