ಕನಕದಾಸ ಜಯಂತಿ ಆಚರಣೆ ನಿಮಿತ್ತವಾಗಿ, ಹಾಲುಮತ ಸಮಾಜದ ಯುವಕರಿಂದ – ವೃದ್ಧರಿಗೆ ಹಣ್ಣ ಹಂಪಲು ವಿತರಣೆ.

ಮಾನ್ವಿ ನ. 18

ಹಾಲುಮತ ಸಮಾಜದವರು ಹಾಲಿನಂತ ಮನಸ್ಸು ಎನ್ನುವುದಕ್ಕೆ ಮಾನ್ವಿ ಪಟ್ಟಣದ ನೆರಳು ವೃದ್ಧಾಶ್ರಮ ದವರಿಗೆ ಹಾಲುಮತ ಸಮಾಜದ ಯುವಕರು ಹಣ್ಣು ಹಂಪಲು ಹಾಗೂ ಒಂದು ಚೀಲ ಅಕ್ಕಿ ಮೂಟೆ ಕೊಟ್ಟಿರುವುದೆ ಸಾಕ್ಷಿ. ಕನಕದಾಸ ಜಯಂತಿಯನ್ನು ದೇಶದ ಪ್ರತಿಯೊಬ್ಬರೂ ಆಚರಣೆ ಮಾಡಬೇಕು. ಯಾಕಂದರೆ ಅವರ ವಿಚಾರ ಧಾರೆಗಳನ್ನು ಅಳವಡಿಸಿ ಕೊಂಡು ನಡೆದಾಗ ಮಾತ್ರ ಮಹಾನ್ ನಾಯಕರಿಗೆ ಕೊಟ್ಟ ಗೌರವ ಎಂದು ಪತ್ರಕರ್ತ ಪರಶುರಾಮ ಚೌಡ್ಕಿ ತಿಳಿಸಿದರು.

ಕನಕದಾಸ ಜಯಂತಿ ಅಂಗವಾಗಿ ಲಿಂಗಯ್ಯ ಮತ್ತಯ ಮುಚಿಗೇರಿ ವೀರೇಶ ಸೇರಿದಂತೆ ಇನ್ನಿತರ ಯುವಕರು ನೊಂದ ಬಡ ಜೀವಿಗಳಿಗೆ ಸಹಾಯ ಮಾಡುವ ಗುಣ ಹೊಂದಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button