ಬಿಸಿಲು ತಾಪಮಾನ ದಿಂದ ಸ್ವಯಂ ರಕ್ಷಣಾ – ಕ್ರಮಗಳನ್ನು ಪಾಲಿಸಿರಿ ಎಸ್.ಎಸ್ ಅಂಗಡಿ.
ಶಿರೂರು ಫೆ.20

ಬಾಗಲಕೋಟ ತಾಲೂಕಿನ ಗುಂಡನಪಲ್ಲೆ ಗ್ರಾಮದ ದಾಳಮ್ಮದೇವಿ ಗುಡಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ,”ಬಿಸಿಲು ತಾಪಮಾನ ದಿಂದ ರಕ್ಷಣೆಗೆ ಸ್ವಯಂ ಆರೋಗ್ಯ ರಕ್ಷಣಾಕ್ರಮಗಳ” ಕುರಿತು ಜನ ಜಾಗೃತಿ ಆಯೋಜಿಸಲಾಗಿತ್ತು. ಗ್ರಾಮದ ಮುಖಂಡರಾದ ಹುಸನಪ್ಪ ಮೇಲಿನಮನಿ ಬಸಪ್ಪ ಮಾದರ, ಬಸಪ್ಪ ಕಮತರ, ತುಳಸಪ್ಪ ಮಾದರ, ಗದಿಗೆಪ್ಪ ಮಾದರ ಶಿವಪ್ಪ ಮಾದರ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿ ಬಿಸಿಲು ತಾಪಮಾನ ತಡೆ ವೈಜ್ಞಾನಿಕ ಮಾಹಿತಿ ಕರ ಪತ್ರಗಳ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು,ಸೂರ್ಯನ ತಾಪಮಾನ ಹೆಚ್ಚುತ್ತಿದೆ ಇರಲಿ ಜಾಗೃತಿ, ಬಿಸಿಲು ತಾಪಮಾನ ದಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ, ರಕ್ತದೊತ್ತಡ, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿಶಕ್ತಿ ಬಾಯಾರಿಕೆ ದೇಹದ ಉಷ್ಣತೆ ಹೆಚ್ಚತ್ತದೆ. ಮಕ್ಕಳು ವಯೊವೃದ್ಧರು ಸ್ವಯಂ ರಕ್ಷಣಾ ಕ್ರಮಗಳು ಅನುಸರಿಸ ಬೇಕು ಶುದ್ಧ ನೀರು ಸೇವನೆ ಕಲ್ಲಂಗಡಿ, ಎಳೇನೀರು, ತರಕಾರಿ ಹಣ್ಣು ಹೆಚ್ಚಾಗಿ ಸೇವಿಸಬೇಕು ಲಿಂಬು ಶರಬತ್ತು, ಓ.ಆರ್.ಎಸ್ ದ್ರಾವಣ ಸೇವಸಬೇಕು, ಹತ್ತಿ ಬಟ್ಟಿ ಧರಿಸಬೇಕು, ಛತ್ರಿ ಉಪಯೋಗಿಸ ಬೇಕು. ಶ್ರಮಿಕ ರೈತಾಪಿಗಳು ಮುಂಜಾನೆ ಹಾಗೂ ಸಂಜೆ ವೇಳೆ ಕಾರ್ಯಮಾಡಿ ಮಧ್ಯಾನ್ಹ ವೇಳೆ ಮರದ ನೇರಳಿನ ಆಶ್ರಯ ಪಡೆಯಬೇಕು. ಆರೋಗ್ಯ ಸಮಸ್ಯೆ ಇರುವವರು ಮಕ್ಕಳು, ವಯೋವೃದ್ಧರು ಗರ್ಭಿಣಿಯರು ಬಿಸಿಲು ತಾಪಮಾನ ದಿಂದ ತಪ್ಪಿಸಿ ಕೊಂಡು ಆರೋಗ್ಯಕರ ಜೀವನ ಸಾಗಿಸಬೇಕು. ಬೆಸಿಗೆ ಕಾಲದಲ್ಲಿ ಶುದ್ಧ ನೀರು ಸೇವನೆ, ಬಿಸಿ ಆಹಾರ ಸೇವನೆ, ಬಿಸಿಲು ತಾಪಮಾನ ದಿಂದ ಯಾವುದೇ ತರಹ ಆರೋಗ್ಯ ಸಮಸ್ಯಗಳು ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರದ ಸರಕಾರಿ ಆಸ್ಪತ್ರೆ ಸಂಪರ್ಕಿಸಿರಿ ಉಚಿತ 104 ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಸಲಹೆ ಪಡೆಯಿರಿ” ಸೂರ್ಯನ ತಾಪಮಾನ ಹೆಚ್ಚುತ್ತಿದೆ ಇರಲಿ ಜಾಗೃತಿ, ನಿಮ್ಮ ಆರೋಗ್ಯ ನಮ್ಮ ಬದ್ಧತೆ” ವಾಂತಿ ಬೇಧಿ ತಡೆ ಮುಂಜಾಗ್ರತೆ ಯಾಗಿ ವೈಯಕ್ತಿಕ ಸ್ವಚ್ಛತೆ ಶುದ್ಧ ನೀರು ಸೇವಿಸಿ ಆರೋಗ್ಯ ಇಲಾಖೆ ವಿತರಿಸುವ ಓ.ಆರ್.ಎಸ್ ಸದ್ಭಳಿಕೆ ಮಾಡಿ ಕೊಳ್ಳಿರಿ ಎಂದು ಜನಜಾಗೃತಿ ಮೂಡಿಸಿದರು. “ಬಿಸಿಲು ತಾಪಮಾನ ಸ್ವಯಂ ರಕ್ಷಣಾ ಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.