“ಜಗದಲಿ ಒಳ್ಳೆಯತನಕೆ ಹೊಗಳಿಕೆ ತೆಗಳಿಕೆಗಳು ನಿಶ್ಚಿತ”…..

ತಂದೆ ತಾಯಿ ಹಿರಿಯರ ಅನುಭವದ ನುಡಿ
ಪಾಲಿಸಿ
ಜೀವನ ಪಾವನವಾಗಿಸಿ
ರಾಗದ್ವೇಷ ರೋಷ ಕೋಪ ತಾಪ
ನಾಶ ಮಾಡುವ ಶತ್ರುಗಳು
ಹತ್ತಿರ ಸೂಳಿಯದಂತೆ ಜಾಗೃತಿ ವಹಿಸಿ
ಸ್ವಚ್ಛತೆ ಸರಳತೆ ಸತ್ಯತೆ ಶುದ್ಧತೆ ಅನುಸರಿಸಿ
ಸ್ವರ್ಗದ ಸಿರಿ ಅನುಭವಿಸಿ
ಶ್ರಮದ ಫಲದಲಿ ಹಂಚಿ ಸವಿಯುವ ಗುಣ
ಉತ್ತಮರಲಿ ಅತ್ಯೂತ್ತಮನು
ದಯೆ ಕರುಣೆ ದಾಕ್ಷಣ್ಯ ಸಮಕ್ಕಾಗುವ ಗುಣ
ಜೀವನ ಸಂತೋಷದಲಿರಿಸುವುದು
ಕಂದಮಗಳ ನಗು ಜೋತೆ ಸ್ನೇಹ
ಪ್ರೀತಿ ಒಲುಮೆ ತೋರುವ ಕ್ಷಣಗಳು
ದಿಟ ಜೀವನ ಅಮೃತ ಘಳಿಗೆ ಗಳಿಸು
ಪರಿಸರ ಸ್ನೇಹ ಪ್ರಾಣಿ ಪಕ್ಷಿ
ಗಿಡಮರ ಹೂಬಳ್ಳಿ ಜೋತೆ
ನಲಿಯುವ ಸುಸಮಯ
ವಾಸ್ತವ ಸುಖಜೀವನ ಪಯಣವು
ಮಹಾತ್ಮರ ಸಾಧಕರ ಜೀವನ ಚರಿತ್ರೆ ಓದು
ಬಾಳಲಿ ಬರುವ ಕಷ್ಟ ನಷ್ಠ ಎದಿರಿಸುವ
ಕಲೆ ಶಕ್ತಿ ಯುಕ್ತಿ ಲಭಿಸುವುದು
ಕಾಯಕ ಯಾವುದಾದರೇನು ಪ್ರಾಮಾಣಿಕತೆ
ನಿಷ್ಠೆ ಖುಷಿಯಿಂದ ನಿರ್ವಹಿಸಿ
ಬದುಕಿನ ಪಯಣದಲಿ
ಆನಂದಮಯ ಲಭಿಸುವುದು
ಜಗದಲಿ ಒಳ್ಳೆಯತನಕೆ ಹೊಗಳಿಕೆ
ತೆಗಳಿಕೆಗಳು ನಿಶ್ಚಿತ
ಜನರಾಡುವ ಮಾತುಗಳಿಗೆ
ಹಿಗ್ಗದೇ ಕುಗ್ಗದೇ ನಿಶ್ಚಿಂತನಾಗಿರು
ಜೀವಮಾನದಲಿ ಬಂದ ಕ್ಷಣಗಳು
ಸಾರ್ಥಕತೆಗೆ ಮೆರಗು ತರಲಿ
ಸರ್ವೇಜನ ಸುಖಿನೋ ಭವಂತು
ಗುರಿಯಾಗಿಸು ಜೀವನದ
ಬಾಳ ಬಂಡಿ ಸಾಗಿಸು
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ.