ಗೃಹ ಲಕ್ಷ್ಮೀ ಯೋಜನೆ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಗೃಹಣಿ(ಯಜಮಾನಿಗೆ) 2000 ರೂಪಾಯಿ…!
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ "ನಾ ನಾಯಕಿ" ಸಮಾವೇಶದಲ್ಲಿ ಕಾಂಗ್ರೆಸ್ ಮಹತ್ವದ ಘೋಷಣೆ ಮಾಡಿತು...!
ಬೆಂಗಳೂರು :
ಇಂದು ಅರಮನೆಯ ಮೈದಾನದಲ್ಲಿ ನಡೆದ “ನಾ ನಾಯಕಿ” ಸಮಾವೇಶದಲ್ಲಿ ,ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ “ಗೃಹಲಕ್ಷ್ಮಿ ಯೋಜನೆ” ಹೆಸರಿನಲ್ಲಿ ಪ್ರತಿ ಕುಟುಂಬದ ಗೃಹಣಿ (ಮನೆ ಯಜಮಾನಿಗೆ) ತಿಂಗಳಿಗೆ ರೂ. 2,000 ನೆರವು ನೀಡುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ನಗರದ ಅರಮನೆ ಮೈದಾನದಲ್ಲಿ ಇಂದು (ಜ.16) ನಡೆಯುತ್ತಿರುವ ‘ನಾ ನಾಯಕಿ’ ಸಮಾವೇಶದಲ್ಲಿ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಹಿ ಇರುವ “ಗೃಹಲಕ್ಷ್ಮಿ ಯೋಜನೆಯ ” ಚೆಕ್ ಪ್ರತಿಕೃತಿಯನ್ನು AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಗೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಅನೇಕ ನಾಯಕರು, ಗೃಹಲಕ್ಷ್ಮಿ ಯೋಜನೆಯ ಘೋಷಣೆಯ ಭಿತ್ತಿಪತ್ರಗಳನ್ನು ಹಿಡಿದು ಜನರಲ್ಲಿ ಭರವಸೆ ನೀಡಿದರು.