ಕರವೇ ಕಾರ್ಯಕರ್ತರನ್ನು ಬಿಡುಗಡೆ ಗೊಳಿಸುವಂತೆ ಸಿ.ಎಂ ಗೆ ಒತ್ತಾಯಿಸುವಂತೆ ಡಾ.ಎನ್.ಟಿ.ಶ್ರೀನಿವಾಸ್ ಶಾಸಕರಿಗೆ ಮನವಿ.

ಕೂಡ್ಲಿಗಿ ಜನೇವರಿ.2

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಡಾಕ್ಟರ್ ಎನ್ ಟಿ ಶ್ರೀನಿವಾಸ್ ಶಾಸಕರಿಗೆ ಕರವೇ ಕಾರ್ಯಕರ್ತರು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹಾಗೂ ಕಾರ್ಯಕರ್ತರು ಬಂಧನವನ್ನು ಖಂಡನೆಯವಾದದ್ದು ಎಂದು ಕೂಡ್ಲಿಗಿಯ ಕರವೇ ತಾಲೂಕ ಅಧ್ಯಕ್ಷರಾದ ಕಾಟೇರ್ ತಿಳಿಸುವುದರೊಂದಿಗೆ ಹಾಲೇಶ್ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ಸಂರ್ಭದಲ್ಲಿ ಡಿಸೆಂಬರ್ 27.ರಂದು ಬೆಂಗಳೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ( ಸಾದಳ್ಳಿ ಗೇಟ್ ) ಬಳಿಯಿಂದ ಕಬ್ಬನ್ ಪಾರ್ಕ್ ವರೆಗೂ ಬೃಹತ್ ಜನಜಾಗೃತಿ ಪ್ರತಿಭಟನೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಕನ್ನಡ ಬಳಸಿ,ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ, ಎಂಬ ಘೋಷಣೆಗಳೊಂದಿಗೆ ಅಂಗಡಿ ಮುಂಗಟ್ಟಗಳ ಹೆಸರುಗಳು ಕನ್ನಡದಲ್ಲಿ ಇರಬೇಕು,ಉದ್ಯಮಿಗಳಿಗೆ ವ್ಯಾಪಾರಸ್ಥರು ನಿಮಗಿದು ಕೊನೆಯ ಎಚ್ಚರಿಕೆ, ಎಂಬ ನಾಮ ಫಲಕವನ್ನು ಹಿಡಿದು ಕೊಂಡು ಸಾವಿರಾರು ಕಾರ್ಯಕರ್ತರು ಕನ್ನಡ,ನಾಡು ನುಡಿ, ಜಲದ ಬಗ್ಗೆ ಹೋರಾಟ ಮಾಡುತ್ತಿರುವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರು ಹಾಗೂ ಕಾರ್ಯಕರ್ತರನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಬೇಕು ಎಂಬ ಕುರಿತು ಸಿಎಂ ಅವರಿಗೆ ಒತ್ತಡ ಹಾಕುವಂತೆ ಶಾಸಕರಿಗೆ ಕೂಡ್ಲಿಗಿ ತಾಲೂಕಾ ಘಟಕ ಕರವೇ ಕಾರ್ಯಕರ್ತರು ಮನುವಿ ನೀಡಲಾಯಿತು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಶಾಸಕರು ಮಾತನಾಡಿ ಮಾನ್ಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ರವರ ಬಳಿ ಚರ್ಚಿಸುವುದಾಗಿ ಎಂದು ತಿಳಿಸಿದರು, ಕನ್ನಡಪರ ಹೋರಾಟಗಾರರ ಬಿಡುಗಡೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆಂದು ಕೂಡ್ಲಿಗಿ ತಾಲೂಕಿನ ಕರವೇ ಕಾರ್ಯಕರ್ತರಿಗೆ ಸಂದರ್ಭದಲ್ಲಿ ತಿಳಿಸಿದರು, ಈ ಸಂದರ್ಭದಲ್ಲಿ ಕರವೇ ತಾಲೂಕಾ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಸಾಲುಮನೆ, ತಾಲೂಕಾ ಯುವ ಘಟಕದ ಅಧ್ಯಕ್ಷ ಓಬಳೇಶ್,ತಾಲೂಕು ಉಪಾಧ್ಯಕ್ಷ ಕೆ. ನಾಗರಾಜ್ ಗುಡೆಕೋಟೆ ಗ್ರಾಮ ಘಟಕದ ಅಧ್ಯಕ್ಷ ಶಿವಕುಮಾರ್,ಯುವ ಘಟಕ ಪ್ರಧಾನ ಕಾರ್ಯದರ್ಶಿ ಕಾಶಿನಾಥ್, ಯುವ ಘಟಕ ಉಪಾಧ್ಯಕ್ಷ ಮಹಮದ್ ತೊಪಿಕ್,ನಿರ್ಕಲ್ ಪ್ಪರ ಅಜ್ಜಯ್ಯ, ಜಿ.ರಾಜ ,ಗೌಡ್ರು ಶರಣಪ್ಪ, ಇದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button