ನಕ್ಕುಂದಿ ಪಿಡಿಓ ಬಸವರಾಜ & ಮಾನ್ವಿ ಇ.ಓ ಖಾಲಿದ್ ಅಹ್ಮದ್ – ಕಣ್ಣಿದ್ದು ಕುರುಡರು.
ನಕ್ಕುಂದಿ ಮಾ.28

ನರೇಗಾ ಯೋಜನೆಯಡಿ ಗ್ರಾಮವನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಕಡತದಲ್ಲಿ ಮಾತ್ರ ಉಲ್ಲೇಖ ವಾಗಿರುತ್ತದೆ. ಆದರೆ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾಮವನ್ನು ಒಮ್ಮೆ ಸುತ್ತು ಹಾಕಿದರೆ ಸಾಕು ಸರಕಾರದ ಅನುದಾನ ಕಡತದಲ್ಲಿ ಲೂಟಿಯಾಗಿದೆ ಅಂತಾ ಸರಕಾರಕ್ಕೆ ಅರಿವಾಗುತ್ತದೆ.
ನಕ್ಕುಂದಿ ಗ್ರಾಮದಿಂದ ಮಾನ್ವಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನೋಡಿದರೆ ಸಾಕು ಗಬ್ಬು ನಾರುತ್ತಿದೆ. ಜನರಂತು ಪಿಡಿಓ ಬಸವರಾಜ ಹಾಗೂ ಮಾನ್ವಿ ತಾಲೂಕ ಪಂಚಾಯತಿ ಇಒ ಖಾಲಿದ್ ಅಹ್ಮದ್ ಸಾಹೇಬ್ರಿಗೆ ಇಡೀಶಾಪ ಹಾಕುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ನಕ್ಕುಂದಿ ಗ್ರಾಮದ ಅಭಿವೃದ್ಧಿಗಾಗಿ ಬಂದ ಅನುದಾನವನ್ನು ಯಾರು ಲೂಟಿ ಮಾಡಿದ್ದಾರೆಂದು ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಿದರೆ. ಭ್ರಷ್ಟರು ಯಾರೆಂದು ಬಯಲಿಗೆ ಬೀಳೋದು ಗ್ಯಾರಂಟಿ.
ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ನೀವು ತಾಲೂಕ ಪಂಚಾಯತಿಯಲ್ಲಿ ಕೂರದೆ ನಕ್ಕುಂದಿ ಗ್ರಾಮಸ್ಥರ ನೋವನ್ನು ಅರಿತು ಗ್ರಾಮವನ್ನು ಸುತ್ತಾಕಿ ಕೆಲಸ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಇಲ್ಲವೆಂದರೆ ಗ್ರಾಮಸ್ಥರ ಶಾಪ ತಟ್ಟೋದು ಗ್ಯಾರಂಟಿ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ