ಹುನಗುಂದ ಪಟ್ಟಣದಲ್ಲಿ ಸರಣಿ ಕಳ್ಳತನ – ಪೋಲಿಸರು ಖದೀಮರ ಬೇಟೆಗೆ ಸನ್ನದ್ದ.

ಹುನಗುಂದ ಫೆಬ್ರುವರಿ.11

ಪಟ್ಟಣದ ವಿದ್ಯಾನಗರ,ಮಹಾಂತ ನಗರ ಮತ್ತು ಸ್ಟೇಡಿಯಮ್ ಹಿಂದುಗಡೆ ಸೇರಿದಂತೆ ಮೂರು ಮನೆಗಳ ಬೀಗ ಮುರಿದು ಸರಣಿ ಕಳ್ಳತನ ಮಾಡಿದ ಘಟನೆ ರವಿವಾರ ಬೆಳಗಿನ ಜಾವ ಹುನಗುಂದ ಪಟ್ಟಣದಲ್ಲಿ ನಡೆದಿದೆ. ಮನೆಯ ಮಾಲೀಕರು ತಮ್ಮ ವಯಕ್ತಿಕ ಕೆಲಸಕ್ಕೆಂದು ಬೀಗ ಹಾಕಿ ಕೊಂಡು ಮತ್ತೊಂದು ಊರಿಗೆ ಹೋದಾಗ ರಾತ್ರಿ ಸಮಯದಲ್ಲಿ ಮನೆ ಬೀಗ ಮುರಿದು ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ.ಹುನಗುಂದ ಪಟ್ಟಣದ ವಿದ್ಯಾನಗರ ನಿವಾಸಿ ರಾಜಶೇಖರ ಶಿವಪ್ಪ ಯಡಹಳ್ಳಿ ಅವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆಯ ಬೀಗವನ್ನು ಮುರಿದು ೧೭,೮೨,೫೦೦ ಮೌಲ್ಯದ ೩೫೬.೫ ಗ್ರಾಂ ಚಿನ್ನಾಭರಣ ೭೦ ಸಾವಿರ ನಗದು ಹಣ ಸೇರಿದಂತೆ ಬರೋಬರಿ ೧೮,೫೨,೫೦೦ ರೂ ಹಣವನ್ನು ದೋಚಿದರೇ,ಕೆಇಬಿ ಹಿಂದಗಡೆಯ ಬಂಗಾರಿಗೌಡ ನಿಂಗನಗೌಡ ಪಾಟೀಲ ಇವರ ಮನೆ ಚೀಲಕ ಬೀಗ ಮುರಿದು ೪,೧೫,೦೦೦ ರೂ ಬೆಲೆ ಬಾಳುವ ೮೩ ಗ್ರಾಂ ಬಂಗಾರದ ಆಭರಣ,೧೦,೪೦೦ ಕಿಮ್ಮತ್ತಿನ ೨೬೦ ಗ್ರಾಂ ಬೆಳ್ಳಿ,೧,೨೮,೦೦೦ ರೂ ನಗದು ದೋಚಿದ್ದಾರೆ.ಇನ್ನು ಪುರಸಭೆ ಮಂಗಲ ಭವನದ ಹತ್ತಿರದ ಸಂಗಣ್ಣ ಬಸಪ್ಪ ಪೂಜಾರಿ ಅವರ ಮನೆಯ ಮುರಿದು ೨,೧೭,೫೦೦ ರೂ ಕಿಮ್ಮತ್ತಿನ ಬಂಗಾರದ ಆಭರಣ,೭೬೦೦೦ ರೂ ಬೆಲೆಯ ೧೯೦ ಗ್ರಾಂ ಬೆಳ್ಳಿ,೨೦ ಸಾವಿರ ನಗದು ಮತ್ತು ೪೦,೦೦ ಕ್ಯಾಮರ ದೋಚಿ ಕೊಂಡು ಪರಾರಿಯಾಗಿದ್ದಾರೆ.ಒಟ್ಟಾರೆ ಒಂದೇ ದಿನದಲ್ಲಿ ೨೭,೫೯,೪೦೦ ರೂ ಕಳ್ಳತನವಾಗಿದೆ.ಮನೆಗೆ ಸಂಬಂದಪಟ್ಟವರು ಮಾಹಿತಿ ಮೇರೆಗೆ ಹುನಗುಂದ ಠಾಣಿಯ ಡಿಎಸ್‌ಪಿ ವಿಶ್ವನಾಥ ಕುಲಕರ್ಣಿ ಮತ್ತು ಸಿಪಿಐ ಸುನೀಲ ಸವದಿ ಹಾಗೂ ಪ್ರಭಾರಿ ಪಿಎಸೈ ಎಸ.ಬಿ. ಹೊಸಮನಿ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.ಸ್ಥಳಕ್ಕೆ ಜಿಲ್ಲಾ ಸ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವು ದಿನ ಪೂರ್ತಿ ಸ್ಥಳವನ್ನು ಪರಿಶೀಲನೆ ನಡೆಸಿತು.ಖದೀಮರ ಭೇಟೆಗೆ ಪೊಲೀಸ್‌ರು ಸನ್ನಿದ್ದರಾಗಿದ್ದಾರೆ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button