ಹೆಲ್ಮೆಟ್ ಧರಿಸಿ ಬರುವ ಸವಾರರಿಗೆ 🌹 ನೀಡಿ ಪಿಎಸ್ಐ ಚೆನ್ನಯ್ಯ ದೇವೂರ.

ಹುನಗುಂದ ಜನೇವರಿ.9

ರಾಜ್ಯಾಧ್ಯಂತ ದ್ವಿ ಚಕ್ರ ವಾಹನಗಳ ಅಪಘಾತ ಹೆಚ್ಚುತ್ತಿರುವ ಹಿನ್ನಲ್ಲೆಯಲ್ಲಿ ರಾಜ್ಯ ಸರ್ಕಾರ ನ.25 ರಂದು ಹೆಲ್ಮೆಟ್ ಕಡ್ಡಾಯ ಮಾಡಿದ್ದ ಬೆನ್ನಲೆಯೇ ಪೊಲೀಸ್ ಇಲಾಖೆ ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಉದ್ದೇಶದಿಂದ ಸೋಮವಾರ ಪಿಎಸ್‌ಐ ಚನ್ನಯ್ಯ ದೇವೂರ ಅವರು ಹೆಲ್ಮೆಟ್ ಧರಿಸಿದ ದ್ವಿ ಚಕ್ರ ವಾಹನ ಸವಾರ ತಡೆದು ಗುಲಾಬಿ ನೀಡಿ ಸ್ವಾಗತಿಸುವ ಮೂಲಕ ಅಮೂಲ್ಯವಾದ ಜೀವವನ್ನು ರಕ್ಷಿಸಿ ಕೊಳ್ಳಲು ಹೆಲ್ಮೆಟ್ ಕಡ್ಡಾಯವಾಗಿ ಧರಿಸಲು ಸೂಚಿಸಿದರು.ಅಮರಾವತಿ ಕ್ರಾಸ್‌ದಲ್ಲಿ ಜಿಲ್ಲಾ ಪೊಲಿಸ್ ಆದೇಶದ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಅಭಿಯಾನ ನಡೆಸಿ ಹೆಲ್ಮೆಟ್ ಧರಿಸಿ ಬರುವ ಬೈಕ್ ಸವಾರರಿಗೆ ಗುಲಾಬಿ ನೀಡಿದರೇ ಹೆಲ್ಮೆಟ್ ಇಲ್ಲದೇ ಬರುವ ದ್ವಿ ಚಕ್ರ ವಾಹನ ಸವಾರರಿಗೆ ಇತ್ತೀಚಿಗೆ ಮೋಟರ್ ಸೈಕಲ್ ಅಪಘಾತದಲ್ಲಿ ಮೃತಪಟ್ಟ ಜನರಲ್ಲಿ ಹೆಚ್ಚಿನ ಜನರು ತೆಲೆಗೆ ಪೆಟ್ಟು ಬಿದ್ದು ಸಾವನ್ನಪ್ಪುತ್ತಿದ್ದು.ಹೆಲ್ಮೆಟ್ ಧರಿಸುವುದರಿಂದ ಇಂತಹ ಸಾವು ನೋವುಗಳನ್ನು ತಡೆಯಲು ಸಾಧ್ಯ.ನಿಮ್ಮ ಸುರಕ್ಷತೆಯ ಸಂಚಾರಕ್ಕೆ ವಾಹನ ಸವಾರ ಮತ್ತು ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಸವಾರರಿಗೆ ಜಾಗೃತಿಯ ಜೊತೆಗೆ ನಿಯಮವನ್ನು ಪಾಲಿಸದಿದ್ದರೇ ಅಂತವರ ದಂಡ ವಿಧಿಸುವ ಮೂಲಕ ಕಾನೂನು ಪ್ರಕಾರ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.ಅದರ ಜೊತೆಗೆ ಸಾರ್ವಜನಿಕರು ತಾವು ಇರುವ ಸ್ಥಳದ ಸುತ್ತ ಮುತ್ತಲಿನಲ್ಲಿ ಅಪಘಾತ,ಜಗಳ,ದಾಂಧಲೆ,ಇನ್ನಿತರ ಅಪರಾಧ ತನದ ಘಟನೆಗಳು ಜರುಗಿದರೆ ತಕ್ಷಣವೇ ೧೧೨ ಇಆರ್‌ಎಸ್‌ಎಸ್ ವಾಹನಕ್ಕೆ ಕರೆ ಮಾಡಿ ತಕ್ಷಣ ಪರಿಹಾರ ಕಾಣಬಹುದು ಎಂದರು.ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸಿದ್ದು ಕೌಲಗಿ,ರಮೇಶ ಹೊಸಮನಿ, ಮೌನೇಶ ಪತ್ತಾರ ಸೇರಿದ್ದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button