ಕರುನಾಡು…..

ಕರುನಾಡಿದು ಚೆಂದ,
ನನ್ನಯ ಕರುನಾಡಿದು ಅಂದ.
ಹೇಳುವೆ ಕೇಳೊ ಕಂದ,
ಹೇಳುವೆ ಕೇಳೊ ನೀ ಕನ್ನಡದ ಕಂದ.
ಶರಣರಿದ್ದ ನಾಡಿದು,
ಅವರು ಬೆಳೆದೊದ ತವರೂರಿದು.
ಕಲ್ಪವತರು ನಾಡಿದು,
ನನ್ನ ಹೆಮ್ಮೆಯ ಕರುನಾಡಿದು.
ಮಲೆನಾಡ ಸೊಬಗಿನ ನಾಡಿದು ,
ಜೋಗವು ಧುಮುಕುವ ಬೀಡಿದು.
ಕವಿಪುಂಗವರ ನಾಡಿದು,
ನನ್ನ ಹೃದಯವನ್ನಾವರಿಸಿದ ಬೀಡಿದು.
ಸಂಸ್ಕೃತಿಯ ತವರೂರಿದು,ವೈಭವದ ನಾಡಿದು.
ಹೊನ್ನಿನ ಗಣಿಯಿದು,
ನನ್ನುಸಿರಲಿ ಬೆರೆತ ನಾಡಿದು.
✍️ಕು|| ತ್ರಿವೇಣಿ ಆರ್. ಹಾಲ್ಕರ್
ಗೊಬ್ಬರವಾಡಿ, ಕಲಬುರ್ಗಿ ಜಿಲ್ಲೆ
ಕೃಷಿ ಮಹಾವಿದ್ಯಾಲಯ
ಕಲಬುರ್ಗಿಯ ವಿದ್ಯಾರ್ಥಿನಿ