ಶ್ರೀ ರಾಗ ಭೈರವ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ – ಡಾ, ಶಿವಣ್ಣ ಸಾರಥ್ಯದಲ್ಲಿ ಆಯೋಜನೆ.
ಮೈಸೂರು ಏ.13

ಕಾವ್ಯ ಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಡಾ, ಜಿ.ಶಿವಣ್ಣ ಸಾರಥ್ಯದಲ್ಲಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಸಂಯುಕ್ತಾಶ್ರಯದಲ್ಲಿ ದಿನಾಂಕ : 10-04-2025 ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಶ್ರೀ ರಾಗ ಭೈರವ ನೃತ್ಯ ಕಲಾ ಕೇಂದ್ರ, ತಾವರೆಕೆರೆ, ಬೆಂಗಳೂರು ಶಿಕ್ಷಕಿ ಆದ ಶ್ರೀಮತಿ ರಮ್ಯಾ ಚಲುವ ಮೂರ್ತಿ ರವರ ಶಿಷ್ಯ ವೃಂದದವರಾದ ಕುಮಾರಿ ಕೃತಿಕಾ, ಕುಮಾರಿ ಗಾನಶ್ರೀ, ಕುಮಾರಿ ನಮ್ರತ, ಕುಮಾರಿ ಅನಘ, ಕುಮಾರಿ ಮಿಂಚು, ಕುಮಾರಿ ಲಕ್ಷ್ಮೀ, ಕುಮಾರಿ ಚೈತನ್ಯ , ಕುಮಾರಿ ಪ್ರಕೃತಿ, ಕುಮಾರಿ ಇಂದುಶ್ರೀ ಮಕ್ಕಳಿಂದ ಸಮಾರಂಭದಲ್ಲಿ ಸ್ವಾಗತ ನೃತ್ಯವನ್ನು ಮಾಡಿ ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟರು.

ದಿವ್ಯ ಸಾನಿಧ್ಯ ಡಾ, ಆರೂಢ ಭಾರತೀ ಮಹಾಸ್ವಾಮಿಗಳು ವಹಿಸಿದ್ದರು, ಶ್ರೀಮಡ್ಡೀಕೆರೆ ಗೋಪಾಲ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಉಪಾಧ್ಯಕ್ಷರು ಟಿ.ತ್ಯಾಗರಾಜ್,ಡಾ, ಚಿಕ್ಕ ಹೆಜ್ಜಾಜಿ ಮಹದೇವ್, ಅಕ್ಷರತಾಯಿ ಲೂಸಿ ಸಾಲ್ಡಾನ, ಚಂದ್ರಶೇಖರ ಮಾಡಲಗೇರಿ, ಸರ್ವಾಧ್ಯಕ್ಷರು ಪಂಡಿತ್ ಭೀ.ಅವಜಿ, ವೀರೇಶ್.ಕೆ ಎಸ್ ಮತ್ತು ಸಂಗೀತಾ ಮಠಪತಿ ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ