ವೀರಪ್ಪಜ್ಜನವರ ಭಾವ ಚಿತ್ರದ ಮೆರವಣಿಗೆಯು – ಅದ್ದೂರಿಯಿಂದ ಜರುಗಿತು.
ನರೇಗಲ್ ಜ.31

ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ನಿಮಿತ್ಯ ಗುರುವಾರ ಪಟ್ಟಣದಲ್ಲಿ ನಡೆದ ವೀರಪ್ಪಜ್ಜನವರ ಭಾವಚಿತ್ರದ ಮೆರವಣಿಗೆಯು ಭಕ್ತರ ಕಣ್ಮನಗಳಲ್ಲಿ ಸಂತೋಷವನ್ನು ತುಂಬಿತು.ಪಟ್ಟಣದ ಸಂತೆ ಬಜಾರನಲ್ಲಿರುವ ಈ ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ನಿಡಗುಂದಿ ಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು.ಮೆರವಣಿಗೆ ಮುಂದೆ ಕುಂಭಹೊತ್ತ ಮಹಿಳೆಯರು, ಅಂಬೇಡ್ಕರ್ ನಗರದ ಯುವಕರ ಕೋಲಾಟ, ಡೊಳ್ಳು ಭಜನೆಯೊಂದಿಗೆ ಮೆರವಣಿಗೆಗೆ ವಿಶೇಷ ಕಳೆ ನೀಡಿತು.ರೋಣ ಬೂದೀಶ್ವರ ಮಠದ ವಿಶ್ವನಾಥ ಸ್ವಾಮೀಜಿ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆ ಈರಣ್ಣನ ಪಾದಗಟ್ಟಿ, ಭಾಗ್ಯ ನಗರದಿಂದ ಮಾರಿಕಾಂಬ ದೇವಸ್ಥಾನ, ಹಳೆ ಬಸ್ನಿಲ್ದಾಣ, ಮುಖ್ಯ ಬಸ್ ನಿಲ್ದಾಣದಿಂದ ಕೋಡಿಕೊಪ್ಪ ಮಾರ್ಗವಾಗಿ ವೀರಪ್ಪಜ್ಜನವರ ಮಠಕ್ಕೆ ತಲುಪಿ ಸಂಪನ್ನ ಗೊಂಡಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗಾಗಿ ಕಟ್ಟಬಸವೇಶ್ವರ ಓಣಿಯ ಸಾರ್ವಜನಿಕರು ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ವೀರಪ್ಪಜ್ಜನ ಮಠದ ಟ್ರಸ್ಟ್ ಕಮಿಟಿಯ ಸದಸ್ಯರು, ಪಟ್ಟಣದ ಅನೇಕ ಗಣ್ಯರು, ಮಜಿರೆ ಹಳ್ಳಿಗಳ ನಾಗರಿಕರು, ಮಹಿಳೆಯರು, ಮಕ್ಕಳು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ ರೋಣ ಗದಗ