ಮೂಗನೂರ ಗ್ರಾಮದಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ.
ಮೂಗನೂರ ಫೆಬ್ರುವರಿ.7

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗನೂರ ಗ್ರಾಮದಲ್ಲಿ ಸಮಾಜಿಕ ಪರಿಶೋಧನಾ ಗ್ರಾಮ ಸಭೆಯ ಹಾಗೂ ರೋಜಗಾರ್ ದಿವಸ ಜರುಗಿತು.ಈ ಸಭೆಯಲ್ಲಿ 2023-24.ನೇ ಸಾಲಿನ ಮೂಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ನರೇಗಾ ಹಾಗೂ 15.ನೇ ಹಣಕಾಸು ಯೋಜನೆ ಅನುದಾನ ಬಳಕೆಯಾದ ಬಗ್ಗೆ ಕಾರ್ಯಕ್ರಮ ವ್ಯವಸ್ಥಾಪಕ ಯು ಆರ್ ಗೋನಾಳ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸರ್ವ ಸದಸ್ಯರ ಮುಂದೆ ತಿಳಿಸಿದರು.ಜೊತೆಗೆ ಕೂಲಿ ಕಾರ್ಮಿಕರ ಹಕ್ಕು ಮತ್ತು ಕರ್ತವ್ಯಗಳ ಸವಿವರವಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಗುರು ಖ್ಯಾಡಿ, ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಸಿಬ್ಬಂದಿ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಛಲವಾದಿ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಬಡಕಣ್ಣವರ, ಡಾಟಾ ಎಂಟ್ರಿ ಆಪರೇಟರ್ ರವಿ, ಕಾಯಕ ಮಿತ್ರ ಜಯಶ್ರೀ ಮಾದರ ಬಿಎಫ್ ಟಿ ಹುಲ್ಲಮ್ಮ ವಡ್ಡರ, ಬಿಲ್ ಕಲೆಕ್ಟರ್ ಪರಸಪ್ಪ ಮುತ್ತತ್ತಿ, ಸರ್ವ ಸದಸ್ಯರು, ಅನುಷ್ಠಾನ ಇಲಾಖೆ ಸಿಬ್ಬಂದಿ ವರ್ಗ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಕಾಯಕ ಬಂಧುಗಳು, ಗ್ರಾಮಸ್ಥರು, ಉಪಸ್ಥಿತರಿದ್ದರು.