ಕ್ಷಯ ರೋಗ ತಡೆಗೆ ಮುಂಜಾಗ್ರತೆಯಾಗಿ ಬಿ.ಸಿ.ಜಿ – ಲಸಿಕಾ ಅಭಿಯಾನ ಜಾಗೃತಿ.

ಹೊನ್ನಾಕಟ್ಟಿ ಆ.29

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳು ಜಿಲ್ಲಾ ಲಸಿಕಾ ಅಧಿಕಾರಿಗಳು ಸಹಯೋಗದಲ್ಲಿ ಬೆನಕಟ್ಟಿ ಉಪ ಕೇಂದ್ರ ವ್ಯಾಪ್ತಿಯ ಹೊನ್ನಾಕಟ್ಟಿಯಲ್ಲಿ, ಕ್ಷಯ ರೋಗ ಮುಕ್ತಕ್ಕಾಗಿ ಬಿ.ಸಿ.ಜಿ ಲಸಿಕಾ ಅಭಿಯಾನ ಅರ್ಹ ಫಲಾನುಭವಿಗಳ ಸಮೀಕ್ಷೆ ಜನ ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು ಟಿ.ಬಿ ಸೋಲುತ್ತದೆ ಭಾರತ ಗೆಲ್ಲುವುದು, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಲ್ಲಿ ಕ್ಷಯ ರೋಗ ಮುಕ್ತಕ್ಕಾಗಿ ಬಿ.ಸಿ.ಜಿ ಲಸಿಕಾ ಅಭಿಯಾನ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳ ಸಮೀಕ್ಷೆ ಜನ ಜಾಗೃತಿ ಪ್ರತಿಯೊಂದು ಕುಟುಂಬ ದತ್ತಾಂಶ ಸಂಗ್ರಹ ಮಾಡಿ ಅಶಕ್ತ ಮಧುಮೇಹ ಕ್ಷಯ ರೋಗ ಚಿಕಿತ್ಸೆಯಲ್ಲಿರುವ ಪ್ರಕರಣ ಸಂಪರ್ಕಗಳ ಮಾಹಿತಿ ಸಂಗ್ರಹಿಸಿ “ಬಿ.ಸಿ.ಜಿ” ಲಸಿಕೆ ಹಾಕಲಾಗುವುದು ಲಸಿಕೆ ಸುರಕ್ಷಿತವಾಗಿದ್ದು ಮಗು ಜನಿಸಿದ ಒಂದು ಘಂಟೆ, ಎಲ್ಲ ಸರಕಾರಿ ಆಸ್ಪತ್ರೆಯಲ್ಲಿ ಬಿ.ಸಿ.ಜಿ ಲಸಿಕೆ ಹಾಕಲಾಗುವುದು ಉಪ ಕೇಂದ್ರ ಲಸಿಕಾ ಅಭಿಯಾನದ ಮುಖಾಂತರ ಲಸಿಕೆ ಹಾಕಲಾಗುವುದು ಅಡ್ಡ ಪರಿಣಾಮಗಳಿದ್ದರೂ ತಾತ್ಕಾಲಿಕ ಕ್ಷಯ ರೋಗ ಮುಂಜಾಗ್ರತೆಯಾಗಿ ಲಸಿಕೆ ಹಾಕಲಾಗುವುದು ಗ್ರಾಮದಲ್ಲಿ ಕ್ಷಯ ರೋಗ ಮುಕ್ತಕ್ಕಾಗಿ ಬಿ.ಸಿ.ಜಿ ಲಸಿಕಾ ಅಭಿಯಾನ ಅರ್ಹ ಫಲಾನುಭವಿಗಳ ಸಮೀಕ್ಷೆ ಕಾರ್ಯಕ್ಕೆ ನಿಮ್ಮ ಮನೆ ಮನೆಗೆ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯ ಕರ್ತೆಯರು ಬಂದಾಗ ಸರಿಯಾದ ಮಾಹಿತಿ ನೀಡಿ ಸಾರ್ವಜನಿಕರು ಸಹಕಾರ ನೀಡಿ ಕ್ಷಯ ರೋಗ ಮುಕ್ತಕ್ಕಾಗಿ ಕೈಜೋಡಿಸ ಬೇಕೆಂದರು. ಕ್ಷಯ ರೋಗ ಮುಕ್ತಾಕ್ಕಾಗಿ “ಬಿ.ಸಿ.ಜಿ” ಲಸಿಕಾ ಅಭಿಯಾನ ಅರ್ಹ ಫಲಾನುಭವಿಗಳ ಸಮೀಕ್ಷೆ ಕಾರ್ಯದಲ್ಲಿ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button