ನಾಗೂರ ಗ್ರಾಮದಲ್ಲಿ ಸುಸ್ಥಿರತೆಯಡೆಗೆ ಖಾತ್ರಿ ನಡಿಗೆ ಅಭಿಯಾನಕ್ಕೆ ಚಾಲನೆ.

ಹುನಗುಂದ ಅಕ್ಟೋಬರ್.4

ಕಾರ್ಮಿಕರ ಆಯವ್ಯಯ ತಯಾರಿಸುವ ಸಲುವಾಗಿ ಅಕ್ಟೋಬರ್ ರಿಂದ ಒಂದು ತಿಂಗಳವರೆಗೆ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ನಾಗೂರ ಗ್ರಾಮ ಪಂಚಾಯತಿ ಮೂಲಕ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, 2024 – 25ನೇ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ಕೃಷಿ ಹೊಂಡ ಬದು ನಿರ್ಮಾಣ, ಬಚ್ಚಲು ಗುಂಡಿ ಸೇರಿದಂತೆ ನರೇಗಾ ಯೋಜನೆಯಡಿ ಸಿಗುತ್ತಿರುವ ವ್ಯಯಕ್ತಿಕ ಕಾಮಗಾರಿಗಳ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಸಂಘಟಿತ ಕಾರ್ಮಿಕರಿಗೆ ಈ – ಶ್ರಮ ಕಾರ್ಡ್ ನಿಂದ ಸಿಗುತ್ತಿರುವ ಲಾಭಗಳ ಬಗ್ಗೆ ತಿಳಿಸಿಕೊಟ್ಟರು.ಬಳಿಕ ಮಾತನಾಡಿದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ. ಎಚ್. ಹಿರೇಅಮರಗೌಡ್ರ ಕೂಲಿ ಕಾರ್ಮಿಕರು ಸಮುದಾಯ ಕಾಮಗಾರಿಗಳ ಬದಲು ವ್ಯಯಕ್ತಿಕ ಕಾಮಗಾರಿಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು, ಇದರಿಂದ ನಿಮ್ಮ ಹೊಲದಲ್ಲಿ ಕೂಲಿ ಜೊತೆಗೆ ಕೆಲಸ ಸಿಗುತ್ತದೆ ಎಂದರು.ಬಳಿಕ ಮನೆ ಮನೆಗೆ ಭೇಟಿ ನೀಡಿ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುತ್ತಿದ್ದು, ನರೇಗಾ ಯೋಜನೆಯಡಿ ಸಿಗುತ್ತಿರುವ ವ್ಯಯಕ್ತಿಕ ಕಾಮಗಾರಿಗಳ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಯಿತು.ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಬಸವರಾಜ ಕೊಪ್ಪದ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎ. ಎಚ್. ಹಿರೇಅಮರಗೌಡ್ರ, ಅಧ್ಯಕ್ಷ ಶಿವಗಂಗಾ ನಾಗೂರ, ಉಪಾಧ್ಯಕ್ಷ ಮಹಾಂತೇಶ ಮುರುಡಿ, ತಾಂತ್ರಿಕ ಸಹಾಯಕ ಲಾಲಿಸಾಬ್ ಗುರಗುಣ್ಣಿ, ಬಿಎಫ್ ಟಿ ಸಾವಿತ್ರಿ ಪೊಲೀಸ್ ಪಾಟೀಲ, ಕಾಯಕಮಿತ್ರ ಸಾವಿತ್ರಿ ಲಿಂಗದಳ್ಳಿ, ಮಾಜಿ ಗ್ರಾಪಂ ಅಧ್ಯಕ್ಷ ನಿಂಗನಗೌಡ ಪರುತಗೌಡ್ರ, ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಬೀಳಗಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ, ಗ್ರಾಪಂ ಸರ್ವ ಸದಸ್ಯರು ಕಾಯಕ ಬಂಧುಗಳು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button