ಜೈಲಿನಿಂದಲೆ ಕೇಂದ್ರ ಸಚಿವರಿಗೆ ಜೀವ ಬೆದರಿಕೆ ಹಾಕಿದ ಹಿಂಡಲಗಾ ಕೇಂದ್ರ ಕಾರಾಗೃಹದ ಖೈದಿ …!
ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಂಗಳೂರಿನ ಕೈದಿ ಜಯೇಶ್ ಪೂಜಾರಿ ಎಂದು ತಿಳಿದು ಬಂದಿದೆ.
ಬೆಳಗಾವಿ :
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಕೆಯನ್ನು ನಡೆಸಿದ್ದಾರೆ, ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಮಂಗಳೂರಿನ ಕೈದಿ ಜಯೇಶ್ ಪೂಜಾರಿ ಎಂದು ಸದ್ಯ ನಾಗ್ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಶನಿವಾರ ಸಂಜೆ ಮೂರು ಗಂಟೆ ಶೋಧ ಕಾರ್ಯಾಚರಣೆ ನಡೆಸಿರುವ ಅವರು, ಭಾನುವಾರವೂ ಶೋಧ ಕಾರ್ಯ ಮುಂದುವರೆಸುವ ಸಾಧ್ಯತೆ ಇದೆ. ಮತ್ತೊಂದೆಡೆ ನಿತಿನ್ ಗಡ್ಕರಿಗೆ ಹಾಗೂ ಅವರ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ಮಂಗಳೂರಿನ ಕೈದಿ ಜಯೇಶ್ ಪೂಜಾರಿ ಅಂತರ್ಜಾಲದಲ್ಲಿ ಸಚಿವರ ಮೊಬೈಲ್ ನಂಬರ್ ಪಡೆದು 3 ಬಾರಿ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆ ಮಾಡಿದ್ದನು. ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲಿದ್ದಾರೆ.
ಜಯೇಶ್ ಪೂಜಾರಿ ಬಳಸಿದ ಮೊಬೈಲ್ಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ, ಆದರೆ ಮೊಬೈಲ್ ಎಲ್ಲೂ ಸಿಗಲಿಲ್ಲ. ಈ ಜಯೇಶ್ ಪೂಜಾರಿ ಕೊಲೆ ಸೇರಿ ಮೂರು ಪ್ರಕರಣದಲ್ಲಿ ಜೈಲು ಸೇರಿದ್ದಾನೆ ಎಂದು ತಿಳಿದು ಬಂದಿದೆ.
ತನ್ನ ಪತ್ನಿಗೆ ಕರೆ ಮಾಡುವುದಾಗಿ ಹೇಳಿ ಜಯೇಶ್ ಪೂಜಾರಿ ಕರೆಗಾಗಿ ಜೈಲಿನಲ್ಲಿದ್ದ ಬೆಳಗಾವಿ ನಗರದ ಆರೋಪಿಯ ಮೊಬೈಲ್ ಪಡೆದಿದ್ದನು. ಮಹಾರಾಷ್ಟ್ರ ಹಾಗೂ ಬೆಳಗಾವಿ ಪೊಲೀಸರಿಂದ ತನಿಖೆ ಮುಂದುವರೆದಿದ್ದು. ಇಂದು ಕೂಡ ಜೈಲಿನಲ್ಲಿ ಮೊಬೈಲ್ ಗಾಗಿ ಶೋಧ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ. ಈ ಅರಗ ಜ್ಞಾನೇಂದ್ರ ಅವರು ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವುದನ್ನು ತಿಳಿದುಕೊಳ್ಳಲು ಭೇಟಿ ನೀಡಿದ್ದರು.
ಬೆಳಗಾವಿ ಹಿಂಡಲಗಾ ಜೈಲಿನ ಕೈದಿಗಳು ಈ ಹಿಂದೆಯೂ ಉತ್ತರ ವಲಯದ IGP ಅಲೋಕ್ ಕುಮಾರ್ಗೆ ಜೀವ ಬೆದರಿಕೆಯನ್ನು ಹಾಕಿದ್ದರು.