ಡೆಂಗ್ಯೂ ಮಹಾಮಾರಿ ತಡೆಗೆ ಈಡೀಜ್ ಇಜಿಪ್ತೆ ಲಾರ್ವಾ ಮುಕ್ತಕ್ಕಾಗಿ ಆಂದೋಲನ ಜಾಗೃತಿ.

ಬಾಗಲಕೋಟೆ ಜು.07

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕೀಟಜನ್ಯ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಗುಂಡನಪಲ್ಲೆ. ಮತ್ತು ಉಪಕೇಂದ್ರ ಬೆನಕಟ್ಟಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ, “ನಮ್ಮ ನಡೆ ಆರೋಗ್ಯದ ಕಡೆ”, ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಅರಿವು ಜಾಗೃತಿ ಆಂದೋಲನ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್ ಎಸ್ ಅಂಗಡಿಯವರು “ಈಡೀಜ್ ಇಜಿಪ್ತೆ ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡಿ ಡೆಂಗ್ಯೂ ಚಿಕೂನ್ ಗುನ್ಯಾ ಮಹಾಮಾರಿ ದೂರ ತಳ್ಳಿ”.ಎರಡು ವಾರಕಿಂತ ಅಧಿಕ ಕೆಮ್ಮು ಇದ್ದರೆ ಕಫದ ಮಾದರಿ ಪರೀಕ್ಷಿಸಿ ಕೊಳ್ಳಿ ಕ್ಷಯರೋಗ ಮುಕ್ತಕ್ಕಾಗಿ ಕೈಜೋಡಿಸಿ. ಶುದ್ಧ ನೀರು ಸೇವಸಿ ವಾಂತಿ ಬೇಧಿ ತಡೆಯಿರಿ. ವೈಯಕ್ತಿಕ ಸ್ವಚ್ಛತೆ ಪಾಲಿಸಿ ಆರೋಗ್ಯವಂತ ಜೀವನ ಸಾಗಿಸಿ. “ರೋಗಗಳ ತಡೆಗೆ ಜಾಗೃತಿಯೇ ಪ್ರಥಮೊಪಚಾರ” ಸಾಂಕ್ರಾಮಿಕ ರೋಗಗಳ ತಡೆಗೆ, ಆರೋಗ್ಯ ಅರಿವು ಜಾಗೃತಿ. ವಿವಿಧ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ ಮಲೇರಿಯಾ, ಡೆಂಗ್ಯೂ ಚಿಕೂನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ, ವಾಂತಿ ಬೇಧ ತಡೆಗೆ ಗ್ರಾಮದಲ್ಲಿ ಮನೆ ಮನೆ ಭೇಟಿ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳಿಗೆ ಭಯ ಬೇಡ ಎಚ್ಚರಿಕೆ ಇರಲಿ ಯಾರಿಗಾದರೂ ಜ್ವರ ಆರೋಗ್ಯದ ಸಮಸ್ಯೆಗಳಿಗೆ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರ ಭೇಟಿ ನೀಡಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಬಂದಾಗ ಸರಿಯಾದ ಮಾಹಿತಿ ನೀಡಿ ಸಹಕರಿಸಲು ಕೋರಲಾಯಿತು. “ನಮ್ಮನಡೆ ಆರೋಗ್ಯದ ಕಡೆ, ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು, ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button