ಅದ್ದೂರಿಯಿಂದ ನಡೆದ ಮಹಾರಾಜರ – ಭವ್ಯ ಶೋಭಾಯಾತ್ರೆ.
ನರೇಗಲ್ಲ ಡಿ.09

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥನದಲ್ಲಿ ನಡೆದಿರುವ ದತ್ತಯಾಗ ಹಾಗೂ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಸಂಜೆ ಶ್ರೀ ಮಾರುತಿ, ಬ್ರಹ್ಮ ಚೈತನ್ಯ ಹಮಾರಾಜರ ದಿವ್ಯ ಪಾದುಕೆ, ಹೆಬ್ಬಳ್ಳಿಯ ಚೈತನ್ಯಾಶ್ರಮದ ಪ.ಪೂ ದತ್ತಾವಧೂತ ಮಹಾರಾಜರ ಭವ್ಯ ಶೋಭಾಯಾತ್ರೆ ನೂರಾರು ಸದ್ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಶ್ರೀರಾಮ ದೇವರ ದೇವಸ್ಥಾನ ದಿಂದ ಪ್ರಾರಂಭವಾದ ಶೋಭಾಯಾತ್ರೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಹಿಂದಿನ ಸದಸ್ಯ ಮದನ ಕುಲಕರ್ಣಿ ಚಾಲನೆ ನೀಡಿದರು. ಬಸ್ ನಿಲ್ದಾಣ, ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ, ಡಾ, ಕಾಳೆ ಆಸ್ಪತ್ರೆ ಮಾರ್ಗದಿಂದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ತಲುಪಲಿದೆ. ಶೋಭಾಯಾತ್ರೆಯಲ್ಲಿ ಸದ್ಗುರುನಾಥ ಮಹಾರಾಜ್ ಕೀ ಜೈ, ಅವಧೂತ ಚಿಂತನ ಶ್ರೀಗುರುದೇವ ದತ್ತ, ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜ ಕೀ ಜೈ, ಸದ್ಗರು ಶ್ರೀ ಬ್ರಹ್ಮಾನಂದ ಮಹಾರಾಜ ಕೀ ಜೈ, ಸದ್ಗುರು ಶ್ರೀ ದತ್ತಾವಧೂತ ಮಹಾರಾಜ ಕೀ ಜೈ, ಪವನಸುತ ಹನುಮಾನ ಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟುವಂತಿತ್ತು. ನಂತರ ದೂಳಿ ಪಾದ ಪೂಜೆ ಜರುಗಿತು. ಈ ವೇಳೆ ನರೇಗಲ್ಲ ಹಾಗೂ ಸುತ್ತ ಮುತ್ತಲಿನ ಗ್ರಾಮದ ಸದ್ಭಕ್ತರು, ಹೆಬ್ಬಳ್ಳಿ ಚೈತನ್ಯಾಶ್ರಮ ದವರು ಪಾಲ್ಗೊಂಡಿದ್ದರು. ನರೇಗಲ್ಲನಲ್ಲಿ ದತ್ತಯಾಗ ಹಾಗೂ ಹನುಮಾನ ಚಾಲೀಸಾ ಪಠಣ ಕಾರ್ಯಕ್ರಮದ ನಿಮಿತ್ತ ಶುಕ್ರವಾರ ಸಂಜೆ ಶ್ರೀ ಮಹಾರಾಜರ ಶೋಭಾಯಾತ್ರೆಯು ಅದ್ದೂರಿಯಾಗಿ ಜರುಗಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ