ಕೂಡ್ಲಿಗಿ – ಕಿಶೋರಿಯರ ಗರ್ಭಿಣಿಯರಿಗೆ ಪೌಷ್ಟಿಕಾಂಶ ಕುರಿತು ಅರಿವು ಕಾರ್ಯಕ್ರಮ.
ಕೂಡ್ಲಿಗಿ ಜೂನ್.14

ಪಟ್ಟಣದ ಆಜಾದ ನಗರದ ಅಂಗನವಾಡಿ ಬಿ ಕೇಂದ್ರದಲ್ಲಿ. ಗರ್ಭಿಣಿ ಮಹಿಳೆಯರು ಹಾಗೂ ಕಿಶೋರಿಯರಿಗೆ, ಪೌಷ್ಟಿಕ ಆಹಾರ ಆರೋಗ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ RKSK ಆಪ್ತ ಸಮಾಲೋಚಕ ಓಬಣ್ಣ ರವರು ಮಾತನಾಡಿ, ಗರ್ಭಿಣಿ ಮಹಿಳೆಯರು ಹಾಗೂ ಕಿಶೋರಿಯರು ಸರ್ವತೋಮುಖವಾಗಿ ಆರೋಗ್ಯಾಭಿವೃದ್ಧಿ ಕಾಯ್ದು ಕೊಳ್ಳಬೇಕಿದೆ. ಮಗುವಿನ ಬೆಳವಣಿಗೆಗೆ, ಹಾಗೂ ಮಾನಸಿಕ ಶಾರೀರಿಕ ಸದೃಢತೆ ಹೊಂದಲು. ಗರ್ಭಿಣಿಯರು ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ, ಹಸಿರು ತರಕಾರಿ ಸೊಪ್ಪುಗಳು ಹೆಚ್ಚಾಗಿ ಊಟದಲ್ಲಿ ಸೇವಿಸಬೇಕು. ಬೇಕರಿ ಕರಿದ ಪದಾರ್ಥಗಳನ್ನು ಸೇವಿಸಬಾರದು, ದೇಹದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ರಕ್ತ ಅಂದರೆ ರಕ್ತ ಹೀನತೆಗೆ ಒಳಗಾಗಬಾರದು ಎಂದರು. ತಾಯಿ ಮತ್ತು ಮಗುವಿನ ಸದೃಢ ಆರೋಗ್ಯ ಕುರಿತು ಕಾಳಜಿ ಹೊಂದಿರಬೇಕು, ಸ್ಥಳೀಯವಾಗಿ ಸಿಗುವಂತಹ ಸೇವಿಸಬಹುದಾದ ಎಲ್ಲಾ ತರಕಾರಿ ಸೊಪ್ಪುಗಳನ್ನು ಯತೇಚ್ಚಾಗಿ ಸೇವಿಸ ಬೇಕೆಂದರು.

ಆರೋಗ್ಯ ಕಾರ್ಯಕರ್ತೆಯರಾದಗಿರಿಜಾ ರವರು ಮಾತನಾಡಿ, ತಾಯಿಯ ಎದೆ ಹಾಲಿನ ಮಹತ್ವದ ಕುರಿತು ತಿಳಿಸಿದರು. PHCO ಸುನಿತಾ ರವರು ಮಾತನಾಡಿ, ಕಿಶೋರಿಯರು ಗರ್ಭಿಣಿ ತಾಯಂದಿರು ರಕ್ತ ಹೀನತೆ ನಿವಾರಣೆಗೆ ಐ ಎಫ್ ಎ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು. ನಿತ್ಯವೂ ಪೌಷ್ಟಿಕಾಂಶವುಳ್ಳ ಆಹಾರವನ್ನೇ ಸೇವಿಸಬೇಕು, ಅಂದಾಗ ಮಾತ್ರ ಮಗು ತಾಯಿ ಸದೃಢ ಆರೋಗ್ಯ ಹೊಂದಲು ದಾಧ್ಯ ಎಂದರು. HIO ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಾದ ಉಮಾ ಹಾಗೂ ಲತಾ. ಮತ್ತು ಗರ್ಭಿಣಿ ಮಹಿಳೆಯರು, ಬಾಣಂತಿ ತಾಯಂದಿರು. ಕಿಶೋರಿಯರು ಅಂಗನವಾಡಿ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ರಾಘವೇಂದ್ರ. ಬಿ. ಸಾಲುಮನೆ.ಕೂಡ್ಲಿಗಿ.