ಜನರ ಉತ್ತಮ ಆರೋಗ್ಯಕ್ಕಾಗಿ ಉದ್ಯಾನ ವನಗಳ ಅಭಿವೃದ್ಧಿ – ಎ. ನಸುರುಲ್ಲಾ.
ಕೊಟ್ಟೂರು ಅಕ್ಟೋಬರ್.13

ಸುಂದರ ಹೂವುಗಳು, ಹಸಿರು ಹುಲ್ಲಿನ ಹಾಸು, ಪಕ್ಷಿಗಳ ಕಲರವ, ಬಗೆ ಬಗೆಯ ಗಿಡ ಮರಗಳನ್ನು ತನ್ನೊಡಲಲ್ಲಿ ತುಂಬಿ ಕೊಂಡು ನಳ ನಳಿಸುತ್ತ ನೋಡುಗರಿಗೆ ಸಂತಸ ನೀಡುವ ಉದ್ಯಾನ ವನಗಳುಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ಬಡಾವಣೆಗಳಲ್ಲಿ ನಿಯಮದ ಪ್ರಕಾರ ಉದ್ಯಾನ ವನಕ್ಕೆಂದು ಮೀಸಲಾದ ಸ್ಥಳವನ್ನು ಪಟ್ಟಣ ಪಂಚಾಯ್ತಿ ತನ್ನ ಸುಪರ್ದಿಗೆ ಪಡೆದು ಸಾರ್ವಜನಿಕರ ಹಿತಗೋಸ್ಕರ ಮೂಲ ಸೌಕರ್ಯಗಳನ್ನು ಕಲ್ಪಿಸಿ ಬೇಕಾಗಿದೆ.ಉದ್ಯಾನ ವನಗಳಲ್ಲಿ ವಾಯು ವಿಹಾರಕ್ಕೆ ಪಾದಾಚಾರಿ ರಸ್ತೆ ಹಾಗೂ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳು ಹಾಗೂ ವ್ಯಾಯಾಮ ಸಾಮಾಗ್ರಿಗಳನ್ನು ಅಳವಡಿಸುವುದು, ಆಸನಗಳ ವ್ಯವಸ್ಥೆ ಹಾಗೂ ನೀರು, ವಿದ್ಯುತ್ ದೀಪ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಆಯಾ ಬಡಾವಣೆ ನಿವಾಸಿಗಳಿಗೆ ವಿಶ್ರಾಂತಿ ಪಡೆಯುವುದರ ಜೊತೆಗೆ ಮನಸ್ಸಿಗೆ ಅಹ್ಲಾದಕರ ವಾತಾವರಣ ಉಂಟಾಗುತ್ತದೆ ಎಂದು ಹಿರಿಯ ನಾಗರಿಕ ಗುರುಬಸವರಾಜ್ ಅಭಿಪ್ರಾಯಿಸುತ್ತಾರೆ.

ಪಟ್ಟಣದ ವಿದ್ಯಾ ನಗರ, ನೇಕಾರ ಕಾಲೋನಿ ಹಾಗೂ ಆಂಜನೇಯ ಬಡಾವಣೆ ವಿಶ್ವೇಶ್ವರಯ್ಯ ಮಕ್ಕಳಿಗೆ ಆಟಿಕೆ ಸಾಮಾಗ್ರಿಗಳು ವೃದ್ಧರಿಗೆ ಮೆಚ್ಚಿಗೆ ಉದ್ಯಾನವನ ಆಗಿದೆ,ಮುಂತಾದ ನಾಲ್ಕೈದು ಉದ್ಯಾನ ವನಗಳಲ್ಲಿ ಹಸಿರು ಹೊನಲು ತಂಡ ಹಾಗೂ ಕೆಲವು ಬಡಾವಣೆ ನಿವಾಸಿಗಳು ಸ್ವಯಂ ಆಸಕ್ತಿ ವಹಿಸಿ ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿರುವುದರಿಂದ ಬೆರಳೆಣಿಕೆಯಷ್ಟು ಉದ್ಯಾನ ವನಗಳು ಹಸುರಿನಿಂದ ಕಂಗೊಳಿಸುತ್ತಿರುವ ದೃಶ್ಯ ಕಾಣಬಹುದು.ಆಯಾ ಬಡಾವಣೆ ನಿವಾಸಿಗಳ ಸಹ ಭಾಗಿತ್ವದಲ್ಲಿ ಉದ್ಯಾನ ವನಗಳ ಅಭಿವೃದ್ಧಿಗೆ ಸ್ಥಳೀಯರು ಕೈ ಜೋಡಿಸಿದರೆ ಪಟ್ಟಣದ ಸೌಂದರ್ಯ ಹೆಚ್ಚಿಸುವುದರ ಜೊತೆಯಲ್ಲಿ ಉದ್ಯಾನ ವನಗಳು ಅಭಿವೃದ್ಧಿಯ ಭಾಗ್ಯ ಕಾಣುತ್ತವೆ ಎಂದು ಹಸಿರು ಹೊನಲು ತಂಡದ ನಾಗರಾಜ್ ಬಂಜಾರ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಪಟ್ಟಣದಾದ್ಯಂತ 140 ಕ್ಕೂ ಹೆಚ್ಚು ಉದ್ಯಾನ ವನಗಳು ಇದ್ದು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಮುಂದಾಗುತ್ತೇವೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲಾ ತಿಳಿಸಿದರು.ಪಟ್ಟಣದ ಜನತೆಗೆ ಸೌಲಭ್ಯಗಳನ್ನು ಕಲ್ಪಿಸಬೇಕಾದ ಸ್ಥಳೀಯ ಆಡಳಿತವು ಅಭಿವೃದ್ಧಿಯ ಪ್ರತಿ ಹಂತದಲ್ಲೂ ಮುಂದಾಗಿ ಪಟ್ಟಣದ ಸೌಂದರ್ಯವನ್ನು ಇಮ್ಮಡಿ ಗೊಳಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು