ಐತಿಹಾಸಿಕ ಕಾರ್ಯಕ್ರಮ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.
ಹೊಸಪೇಟೆ ಡಿಸೆಂಬರ್.1

ನಗರದ ಪತ್ರಿಕಾ ಭವನದಲ್ಲಿ ವಿಜಯನಗರ ಜಿಲ್ಲೆಯ ಚಲವಾದಿ ಮಹಾಸಭಾ ವೇದಿಕೆ ವತಿಯಿಂದ ಪತ್ರಿಕಾ ಗೋಷ್ಠಿ ಕರೆಯಲಾಯಿತು ಸೋಮಶೇಖರ್ ಬಣ್ಣದಮನೆ ನೇತೃತ್ವದಲ್ಲಿ ದಿನಾಂಕ 03/12/2023 ರಂದು ಐತಿಹಾಸಿಕ ಕಾರ್ಯಕ್ರಮ ವಿಜಯನಗರ ಜಿಲ್ಲೆಯ ಛಲವಾದಿ ಮಹಾಸಭಾ ವೇದಿಕೆ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಸರ್ಕಲ್ ನಿಂದ ಮೆರವಣಿಗೆ ಮುಖಾಂತರ ವಿಜಯನಗರ ಜಿಲ್ಲಾ ಒಳಾಂಗಣ ಕ್ರೀಡಾಂಗಣ, ಮುನ್ಸಿಪಾಲ್ ಆಟದ ಮೈದಾನದಲ್ಲಿ ಆಯೋಜಿಸಿದೆ ಈ ಕಾರ್ಯಕ್ರಮಕ್ಕೆ ಡಾ. ಎಚ್. ಸಿ ಮಹಾದೇವಪ್ಪ ಸಮಾಜ ಕಲ್ಯಾಣ ಇಲಾಖೆ ಮತ್ತು ಮೈಸೂರು ಉಸ್ತವಾರಿ ಸಚಿವರು, ಶಾಸಕರು ಎಚ್ .ಆರ್ ಗವಿಯಪ್ಪ, ಪ್ರಸಾದ್ ಅಬ್ಬಯ್ಯ ಶಾಸಕರು ಹುಬ್ಬಳ್ಳಿ ಧಾರವಾಡ ಮೀಸಲು, ಶಾಸಕರು ಡಾ. ಶ್ರೀನಿವಾಸ್ ಕೂಡ್ಲಿಗಿ, ಶಾಸಕರು ದರ್ಶನ್ ಧ್ರುವನಾರಾಯಣ್ ನಂಜನಗೂಡು, ಶಾಸಕಿ ಲತಾ ಮಲ್ಲಿಕಾರ್ಜುನ್ ಹರಪನಹಳ್ಳಿ, ಶಾಸಕರು ನೇಮಿರಾಜ್ ನಾಯ್ಕ್ ಹಗರಿಬೊಮ್ಮನಹಳ್ಳಿ, ಮಾಜಿ ಶಾಸಕರು ನೆಹರೂ ಚ ಓಲೇಕಾರ್, ಶಾಸಕರು ಕೃಷ್ಣ ನಾಯ್ಕ ಹೂವಿನ ಹಡಗಲಿ, ಲಿಂಗೇಶ್ ಚಲವಾದಿ ಮಹಾಸಭಾ ರಾಜ್ಯ ಮುಖಂಡರು ಆಗಮಿಸಲಿದ್ದಾರೆ ಹಾಗೂ ಅವಳಿ ಜಿಲ್ಲೆಗಳಾದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಪರಿಶಿಷ್ಟ ಜಾತಿಗಳಾದ ಛಲವಾದಿ, ಮಾದಿಗ ಲಂಬಾಣಿ, ಭೊವಿ ಸಮಾಜದವರು 101 ಜಾತಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ವಂಚಿತರಾಗುತ್ತಿದ್ದಾರೆ ಈ ವಿದ್ಯಾರ್ಥಿಗಳಿಗೆ ಅನ್ನ ಆಹಾರ ಹೇಗೆ ಮುಖ್ಯನೋ ಅದೇ ರೀತಿಯಲ್ಲಿ ವಿದ್ಯಾಭ್ಯಾಸವು ಸಹ ಅಷ್ಟೇ ಮುಖ್ಯ ಇತಿಹಾಸ ಇಲ್ಲದೆ ಜೀವನ ರೂಪಿಸಿ ಕೊಳ್ಳುವುದು ಬಹಳ ಕಷ್ಟಕರವಾದ ಪರಿಸ್ಥಿತಿ ಪರಿಶಿಷ್ಟ ಜಾತಿಯವರನ್ನು ಒಳಗೊಂಡು ಆಮಂತ್ರಣವನ್ನು ನೀಡಿದ್ದೇವೆ ಹಾಗೂ ಈ ಜಾತಿಯಲ್ಲಿ ಬರುವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವಂತ ವಿಚಾರವನ್ನು ಒಳಗೊಂಡಿದೆ ಪರಿಶಿಷ್ಟ ಜಾತಿಯವರು ಒಗ್ಗಟ್ಟಾಗಿ ಇದ್ದೇವೆ ಎಂದು ಪರಿಶಿಷ್ಟ ಜಾತಿಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುವುದರ ಮುಖಾಂತರ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತೆ ಇಚ್ಚಿಸಿದ್ದೇವೆ.

ಮುಂದಿನ ಹಂತದಲ್ಲಿ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೂ ಸಹ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳುವ ವಿಚಾರವು ಸಹ ನಮ್ಮ ಮುಖಂಡರಲ್ಲಿ ಯಥಾವತ್ತಾಗಿದೆ ಹಂತ ಹಂತವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡಲು ನಿರ್ಣಯಿಸಿದ್ದೇವೆ ಆದರೆ ಎಲ್ಲಾ ಸಮಾಜ ಒಳಕೊಂಡು ಮಾಡಬೇಕಾಗಿತ್ತು ಆದರೆ ಸಮಯದ ಅಭಾವದಿಂದ ಎಸ್ಸಿ ಸಮಾಜದ ವಿದ್ಯಾರ್ಥಿಗಳಿಗೆ ಮಾತ್ರ ಕಾರ್ಯಕ್ರಮ ಮಾಡಲು ಇಚ್ಚಿಸಿದ್ದೇವೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಅದರ ಜೊತೆಯಲ್ಲೇ ಎಸಿ ಎಸ್ಟಿ ಸಮುದಾಯದ ಕುಂದು ಕೊರತೆಗಳ ಸಮಸ್ಯೆಗಳು ಒಳಗೊಂಡಂತೆ ಕೆಲಸಗಳನ್ನು ಸಹ ಮಾಡುತ್ತೇವೆ ಹಾಗೆಯೇ ಸುಮಾರು ಬಾರಿ ನಾವು ಮಾತಾಡುತ್ತಾ ಹೇಳುತ್ತೇವೆ ಈ ದೇಶದ ಮೂಲ ನಿವಾಸಿಗಳು ಒಂದಾಗಬೇಕು ಎಂದು ಆದರೆ ಅದು ಭಾಷಣಕ್ಕೆ ಮಾತ್ರ ಮೀಸಲಾಗಿದೆ ಆದರೆ ಈಗ ನಾವು ಅವರ ಬಳಿ ಹೋಗುವುದರ ಮುಖಾಂತರ ಅವರ ಮಕ್ಕಳನ್ನು ಕರೆದು ಅವರ ಬಳಿ ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಮಾಡುವ ವಿಚಾರವನ್ನು ಒಳಗೊಂಡಿದ್ದೇವೆ ಅಷ್ಟಲ್ಲದೇ ಈ ರಾಜ್ಯದ ಪ್ರಮುಖ ಶಾಸಕರನ್ನು ಒಳಗೊಂಡು ಇಲ್ಲಿರ್ತಕ್ಕಂತ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡುವಂತಹ ಕೆಲಸವನ್ನು ಸಹ ಮಾಡುತ್ತೇವೆ ಎಸ್ ಸಿ ಎಸ್ ಟಿ ಹಾಸ್ಟೆಲ್ ಗಳಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ವಿನಿಮಯ ಮಾಡಲು ಬಯಸಿದ್ದೇವೆ ಸರ್ಕಾರದಿಂದ ಆಯೋಜಿಸಿದ ಭೂ ಒಡೆತನದ ಬಗ್ಗೆ ವಿಜಯನಗರ ಜಿಲ್ಲೆಯಲ್ಲಿ ಸರಿಯಾಗಿ ಆಗ್ತಾ ಇಲ್ಲ ಇದನ್ನು ಮನದಟ್ಟು ಮಾಡುವ ಕೆಲಸವನ್ನು ಮಾಡುತ್ತೇವೆ ಎಸ್ಸಿ ಜಾತಿಯಲ್ಲಿ ಬರ್ತಕ್ಕಂತಹ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವಂತಹ ಕೆಲಸವನ್ನು ಸಹ ಮಾಡುತ್ತೇವೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಚೆಲುವಾದಿ ಮಹಾಸಭ ಮುಖಂಡರು ಹಾಗೂ ಡಾ. ಬಿ .ಆರ್. ಅಂಬೇಡ್ಕರ್ ಸಂಘದ ಮುಖಂಡರು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಾಲತೇಶ್ ಶೆಟ್ಟರ್. ಹೊಸಪೇಟೆ