ಪದ್ಮಶಾಲಿ ಸಮಾಜ ಮಾದರಿಯಾಗಿ ಸೇವೆ ಸಲ್ಲಿಸುವ ಸಮಾಜ – ಶಾಸಕ ನೇಮರಾಜ್ ನಾಯ್ಕ್.

ಕೊಟ್ಟೂರು ಆ.20

ಪಟ್ಟಣದ ಶ್ರೀ ಶಿವಭಕ್ತ ಮಾರ್ಕಂಡೇಶ್ವರ ಸಮುದಾಯ ಸಮಿತಿ ವತಿಯಿಂದ ನೂಲು ಹುಣ್ಣಿಮೆ ಪ್ರಯುಕ್ತ ಆಗಷ್ಟ್ 19 ಮತ್ತು 20 ರಂದು ಅಖಂಡ ಭಜನಾ ಕಾರ್ಯಕ್ರಮ ಹಾಗೂ ನೂಲು ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪದ್ಮಶಾಲಿ ಬಹುತ್ತಮ ಸಮಾಜ ಪ್ರಮಾಣಿಕ ಸಮಾಜ ವಾಗಿದೆ. ಪದ್ಮಶಾಲಿ ಮಾದರಿಯಾಗಿ ಸೇವೆ ಸಲ್ಲಿಸುವ ಸಮಾಜವಾಗಿದೆ. ಸಮುದಾಯದ ಒಗ್ಗಟ್ಟಿನಿಂದ ದೇವಸ್ಥಾನ ಹಾಗೂ ಸಮುದಾಯವನ್ನು ಮತ್ತೊಬ್ಬರು ಗುರುತಿಸುವಂತೆ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಮುಂದಿನ ವರ್ಷ ನೀವುಗಳು ಕೈಗೊಳ್ಳುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ನೇಕಾರರು ನೇಯುವ ಬಟ್ಟೆಯಿಂದ ನಾವು ಸುಸಂಸ್ಕೃತರಾಗಿ ಇಂದು ಜೀವನ ಮಾಡಲು ಸಾಧ್ಯವಾಗಿದೆ. ಎಂದು ಶಾಸಕರಾದ ನೇಮರಾಜ್ ನಾಯ್ಕ್ ಹೇಳಿದರು. ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ ನಮ್ಮ ಅಜ್ಜನವರ ಕಾಲದಿಂದಲೂ ನಮ್ಮ ಕುಟುಂಬ ನಿಮ್ಮ ಸಮಾಜ ದೊಟ್ಟಿಗೆ ಇದೆ ನಾನು ಸಹ ನಿಮ್ಮ ಸಮಾಜದ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀಗುರು ಕೊಟ್ಟೂರೇಶ್ವರರ ಆರ್ಶೀವಾದ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದರು. ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಷ|| ಬ್ರ|| ಶ್ರೀ ಡಾ, ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಶ್ರೀ ಡೋಣೂರು ಚಾನುಕೋಟಿ ಮಠ, ಕೊಟ್ಟೂರು ಇವರ ಆರ್ಶೀವಚನದಲ್ಲಿ ಸಮೂದಯದ ಕೆಲಸಗಳ ಸಾಧನೆ ನೋಡಿ ಸಂಘವನ್ನು ಶ್ಲಾಘಿಸಿದರು. ದೇವಸ್ಥಾನ ಈ ಮಟ್ಟಕ್ಕೆ ಬೆಳೆಯ ಬೇಕಾದರೆ ಸಮೂದಾಯ ಎಲ್ಲಾ ಮುತ್ತೈದೆಯರು,ಮಕ್ಕಳು, ಸಹಕಾರ ಇದೆ ಶ್ರೀ ಮಾರ್ಕಂಡೇಶ್ವರ ಸಮಾಜಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಆರ್ಶೀವಚನ ನೀಡಿದರು. ಪದ್ಮಶಾಲಿ ಬಹುತ್ತಮ ಸಮಾಜ ಒಂದು ಚಿಕ್ಕ ಸಮುದಾಯ ವಾಗಿದ್ದರು, ನಾವುಗಳು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು ನಮಗೆಲ್ಲಾರಿಗೂ ವಾಸ ಮಾಡಲು ನಮ್ಮ ಶ್ರಮದ ಫಲವಾಗಿ ಶಿವ ಮನೆಯನ್ನು ಕಟ್ಟಿ ಕೊಟ್ಟಿದ್ದಾನೆ. ನಾವುಗಳು ಎಲ್ಲಾರು ಸೇರಿ ಸಮುದಾಯದ ಮನೆಯನ್ನ ಕಟ್ಟಬೇಕಾಗಿದೆ.

ಶ್ರೀ ಮಾರ್ಕಂಡೇಶ್ವರ ದೇವಸ್ಥಾನ 1925 ರಲ್ಲಿ ಎಂ.ಎಂ.ಜೆ. ಚಂದ್ರಜ್ಜ ಇವರು ಹಾಗೂ ಅಂದಿನ ಉಜ್ಜಿನಿ ಜಗದ್ಗುರುಗಳ ಸಹಕಾರ ದೊಂದಿಗೆ ದೇವಸ್ಥಾನ ರಚನೆ ಗೊಂಡು ಮುಂದಿನ ವರ್ಷಕ್ಕೆ ಶತಮಾನೋತ್ಸವ ಆಚರಣೆ ಹೊಸ್ತಿಲಲ್ಲಿ ಇದೆ ಈ ಕಾರ್ಯಕ್ರಮಕ್ಕೆ ಎಲ್ಲಾರ ಸಹಕಾರ ಅತ್ಯಗತ್ಯವಾಗಿದೆ ಎಂದು ಪರಮೆಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು. ಶಿವಭಕ್ತ ಮಾರ್ಕಂಡೇಶ್ವರ ಸಮುದಾಯ ಸಮಿತಿಯವರು ನಡೆಸಿ ಕೊಟ್ಟ ನೂಲ ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಕಾಸಲ ಸಾವಿತ್ರಮ್ಮ ಪ್ರಕಾಶ್ ಪ.ಪಂ.ಸದಸ್ಯರು. ಬಾವಿಕಟ್ಟಿ ಶಿವಾನಂದ ವಕೀಲರು , ಬೂದಿ ಶಿವಕುಮಾರ, ಅಜ್ಜನಗೌಡ ಕೆ. ಸಮುದಾಯ ಸಮಿತಿ ಅಧ್ಯಕ್ಷರಾದ ಗೌರಳ್ಳಿ ಕೊಟ್ರೇಶ್, ಹಾಗೂ ಸಂಘದ ಅಧ್ಯಕ್ಷರಾದ ಕಾಸಲ ಕೊಟ್ರೇಶ್, ಉಪಾಧ್ಯಕ್ಷರಾದ ವೆಂಕಟೇಶ್ ಹಾಗೂ ಇತರೆ ಪದಾಧಿಕಾರಿಗಳು ಹಾಗೂ ಶ್ರೀ ಮಾರ್ಕಂಡೇಶ್ವರ ಭಕ್ತರು ಉಪಸ್ಥಿತರಿದ್ದರು.ದೇವರೆಡ್ಡಿ ಕಾರ್ತಿಕ್ ನಿರೂಪಿಸಿದರು. ಕು. ಮೇಡಂ ಪ್ರತಿಭಾ ಮತ್ತು ಪ್ರಗತಿ ಪ್ರಾರ್ಥನೆ ಮಾಡಿದರು. ಸಂಘದ ಸದಸ್ಯರು ವಂದಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button