ವೀರ ವನಿತೆ ಒನಕೆ ಓಬವ್ವ ಜಯಂತಿ ಪೂರ್ವಸಿದ್ಧತಾ ಸಭೆ.

ಕೊಟ್ಟೂರು ನ.07

ನವೆಂಬರ್ 11 ರಂದು ನಡೆಯಲಿರುವ ಕೊಟ್ಟೂರು ತಾಲೂಕ ಮಟ್ಟದ “ವೀರ ವನಿತೆ ಒನಕೆ ಓಬವ್ವ ಜಯಂತಿ” ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ತಾಲೂಕ ಕಛೇರಿಯಲ್ಲಿ 07.11.2024 ರಂದು ಪೂರ್ವಸಿದ್ದತೆಯ ಸಭೆಯನ್ನು ತಹಶೀಲ್ದಾರರಾದ ಅಮರೇಶ ಜಿ.ಕೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಆಸನಗಳ ವ್ಯವಸ್ಥೆ ವೇದಿಕೆ ಸಿದ್ದತೆ, ಒನಕೆ ಓಬವ್ವ ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿರುವ ಕಾರಣ ಸಮಾಜದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದ ಮಹಿಳೆಯನ್ನು ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಸನ್ಮಾನ ಮಾಡಲು ತೀರ್ಮಾನಿಸಿದ್ದು, ಸನ್ಮಾನದ ವೆಚ್ಚ ಹಾಗೂ ಕಾರ್ಯಕ್ರಮದ ನಂತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಬದ್ದಿ ರೇಖಾ ರಮೇಶ್ ಇವರು ಸ್ವಯಂ ಸ್ಪೂರ್ತಿಯಿಂದ ಒಪ್ಪಿದ್ದು, ಸಭೆಯಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸಲಾಯಿತು. ಒನಕೆ ಓಬವ್ವನ ಜೀವನದ ಯಶೋಗಾತೆಯನ್ನು ತಿಳಿಸುವ ಉದ್ದೇಶ ದಿಂದ ವಿಶೇಷ ಉಪನ್ಯಾಸ ವ್ಯವಸ್ಥೆ ಹಾಗೂ ಎಲ್ಲಾ ಸಮಾಜದ ಎಲ್ಲಾ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನೋಡಿ ಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪ ಪಂ ಮುಖ್ಯಾಧಿಕಾರಿ ಎ.ನಸರುಲ್ಲಾ, ಬದ್ದಿ ಮರಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು ಹನುಮಂತಪ್ಪ ವಕೀಲರು ಎನ್ ಭರಮಣ್ಣ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರು ಹೊಟ್ಟೆರ್ ಅಜ್ಜಯ್ಯ ಚಲವಾದಿ ಮಹಾಸಭ ತಾಲೂಕು ಅಧ್ಯಕ್ಷರು, ಕೆಂಗರಾಜ ಪ.ಪಂ ಸದಸ್ಯರು, ಚಲವಾದಿ ಮಹಾಸಭಾ ತಾಲೂಕು ಅಧ್ಯಕ್ಷರಾದ ಸಿ ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರಾದ ಕೊಟ್ರೇಶಪ್ಪ, ಎಲ್ಐಸಿ ಅಂಜಿನಪ್ಪ, ಡಾ, ಬದ್ಯಾನಾಯ್ಕ, ತಾ.ಪಂ ಮ್ಯಾನೇಜರ್ ಪುಪ್ಪಲತಾ ಕಾಮಶೆಟ್ಟಿ, ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು. ಕಛೇರಿಯ ಸಿಬ್ಬಂದಿ ಸಿ.ಮ ಗುರುಬಸವರಾಜ ಎಲ್ಲಾರಿಗೂ ಸ್ವಾಗತ ಕೋರುತ್ತಾ, ನಿರ್ವಹಿಸಿದರು ಹಾಗೂ ಈ ಸಂದರ್ಭದಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button